ಬಂಟ್ವಾಳ: SDPI ಅಭ್ಯರ್ಥಿ ಇಲ್ಯಾಸ್ ತುಂಬೆಗೆ ಇಂದು ಭವ್ಯ ಸ್ವಾಗತ

Prasthutha|

ಬಂಟ್ವಾಳ: 2023 ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಬಂಟ್ವಾಳ ಕ್ಷೇತ್ರದ SDPI ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಇಲ್ಯಾಸ್ ಮುಹಮ್ಮದ್ ತುಂಬೆ ಇಂದು(ಜ.16) ಬಂಟ್ವಾಳಕ್ಕೆ ಆಗಮಿಸಲಿದ್ದು, ಅವರಿಗೆ ಭವ್ಯ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ.

- Advertisement -

ಸಂಜೆ 4 ಗಂಟೆಗೆ ತಲಪಾಡಿ ಟೋಲ್ ಗೇಟಿನಿಂದ ಕೈಕಂಬ ಜಂಕ್ಷನ್ ವರೆಗೆ ವಾಹನ ಜಾಥಾ ನಡೆಯಲಿದೆ. ವಾಹನ ಜಾಥಾ ಬಳಿಕ ಕೈಕಂಬ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.  

Join Whatsapp