ಬಣಕಲ್: ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್: ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ

Prasthutha|

ಮೂಡಿಗೆರೆ: ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬಣಕಲ್ ರಿವರ್ ವ್ಯೂ  ಶಾಲೆಯ ವಿದ್ಯಾರ್ಥಿಗಳು  ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

- Advertisement -

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವೈಷ್ಣವಿ, ಉನ್ನತಿ, ಪ್ರದಿಮ್ನ, ನಿರೀಕ್ಷಾ, ಪ್ರಣತಿ, ಭಾಗವಹಿಸಿದ್ದರು .

ಕಥಾ ವಿಭಾಗದಲ್ಲಿ ನೀರಿಕ್ಷಾ 2ನೇ ಸ್ಥಾನ ಮತ್ತು ಪ್ರಣತಿ ಕಥಾ 3ನೇ ಸ್ಥಾನ ಪಡೆದು  ಆಯ್ಕೆಯಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಮಕ್ಕಳ ಸಾಧನೆಗೆ ರಿವರ್ ವ್ಯೂ ಶಾಲಾ ನಿರ್ದೇಶಕರಾದ ಇಮ್ರಾನ್ ಮುಖ್ಯ ಶಿಕ್ಷಕರಾದ ಶಿವಮೂರ್ತಿ ಎಚ್,ಎನ್, ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಕರಾಟೆ ತರಬೇತುದಾರರಾದ ನಂದೀಶ್ ಹಾಗೂ ಕೃಪಾ ನಂದೀಶ್ ಅಭಿನಂದಿಸಿದ್ದಾರೆ.

Join Whatsapp