ಬಜರಂಗದಳದಿಂದ ಮಾರಕಾಸ್ತ್ರಗಳ ಪ್ರದರ್ಶನ, ಪೂಜೆ: ಕ್ರಮಕ್ಕೆ ಒತ್ತಾಯ

Prasthutha|

ತುಮಕೂರು: ವಿಶ್ವ ಹಿಂದೂ ಪರಿಷತ್ ಬಜರಂಗ ದಳದವರು ಆಯುಧ ಪೂಜೆಯ ಪ್ರಯುಕ್ತ ಮಾರಕಾಸ್ತ್ರಗಳಿಗೆ ಪೂಜೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ತುಮಕೂರು ನಗರದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಮಾರಕಾಸ್ತ್ರಗಳಿಗೆ ಪೂಜೆ ನಡೆದಿದೆ.

ಕತ್ತಿ, ಏರ್ ಗನ್, ಡ್ರ್ಯಾಗರ್, ಲಾಂಗ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳಿಗೆ ಪೂಜೆ ಸಲ್ಲಿಸಲಾಗಿದೆ. ಇಂತಹ ಮಾರಕಾಸ್ತ್ರಗಳನ್ನು ಯಾರು? ಏಕೆ? ಬಳಸುತ್ತಿದ್ದಾರೆ. ಪೊಲೀಸರು ಇವರ ಮೇಲೆ ಯಾಕೆ  ಕ್ರಮಕೈಗೊಂಡಿಲ್ಲ. ಸಂಘಪರಿವಾರಕ್ಕೊಂದು ನ್ಯಾಯ, ಉಳಿದರಿಗೊಂದು ನ್ಯಾಯನಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Join Whatsapp