ಆಪರೇಷನ್ ಕಮಲದ ಅನಾಚಾರಗಳ ತನಿಖೆಯಾದರೆ ಬಿ.ಎಲ್. ಸಂತೋಷ್ ಜೈಲು ಕಂಬಿಗಳ ಹಿಂದೆ ಕೂರುವ ಕಾಲ ಬರುವುದು ನಿಶ್ಚಿತ: ಕಾಂಗ್ರೆಸ್

Prasthutha|

ಬೆಂಗಳೂರು: “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎಂಬ ಮಾತಿನಂತೆ ಸಂಸ್ಕಾರ, ಸಂಸ್ಕೃತಿಯ ಭಾಷಣ ಬಿಗಿಯುವ ಬಿಜೆಪಿಯ ಬಿ. ಎಲ್ ಸಂತೋಷ್ ಎಂಬ ವ್ಯಕ್ತಿಯ ಅಸಲಿ ಕೆಲಸ ಪ್ರಜಾಪ್ರಭುತ್ವದ ಘನತೆಗೆ ಮಸಿ ಬಳಿಯುವಂತದ್ದು. ಆಪರೇಷನ್ ಕಮಲದ ಅನಾಚಾರಗಳ ಸಮರ್ಪಕ ತನಿಖೆಯಾದರೆ ಜೈಲು ಕಂಬಿಗಳ ಹಿಂದೆ ಕ್ಯಾಲುಕ್ಯುಲೇಟರ್ ಹಿಡಿದು ಕೂರುವ ಕಾಲ ಬರುವುದು ನಿಶ್ಚಿತ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.

- Advertisement -

“ಶಾಸಕರ ಖರೀದಿ ಆರೋಪ ಬಿ.ಎಲ್. ಸಂತೋಷ್’ಗೆ ಸಮನ್ಸ್” ಎಂಬ ಮಾಧ್ಯಮವೊಂದರ ಸುದ್ದಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸಂತೋಷ್’ಗೆ ಜೈಲು ನಿಶ್ಚಿತ ಎಂದು ಹೇಳಿದೆ.

Join Whatsapp