ಅಯೋಧ್ಯೆ ಆಯ್ತು, ನಮ್ಮ ಮುಂದಿನ ಗುರಿ ಕಾಶಿ, ಮಥುರಾ: ಸುಬ್ರಮಣಿಯನ್‌ ಸ್ವಾಮಿ

Prasthutha|

- Advertisement -

ಮೈಸೂರು : ಅಯೋಧ್ಯೆ ಪ್ರಕರಣವನ್ನು ಬಗೆಹರಿಸಿಕೊಂಡ ರೀತಿಯಲ್ಲಿಯೇ ಕೃಷ್ಣನ ಜನ್ಮಭೂಮಿ ಮಥುರಾ ಮತ್ತು ಕಾಶಿ ವಿಶ್ವನಾಥ ಮಂದಿರ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುತ್ತೇವೆ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

‘ಹಿಂದೂಗಳ ಶ್ರದ್ಧಾ ಕೇಂದ್ರಗಳು ಮುಸ್ಲಿಂರಿಂದ ನಾಶಗೊಂಡವು. ಇದಕ್ಕೆ ಔರಂಗಜೇಬನ ಆಡಳಿತ ನೀತಿಯೇ ಕಾರಣ. ಹಿಂದೂಗಳ ದೇವಸ್ಥಾನ ನಾಶ ಮಾಡಿದರೆ ಮತ್ತೆ ನಿರ್ಮಾಣವಾಗುತ್ತವೆ. ಹಾಗಾಗಿ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಿ’ ಎಂದು ಆತ ಕರೆ ನೀಡಿದ್ದ. ಹೀಗಾಗಿ ಸಾಕಷ್ಟು ದೇವಾಲಯಗಳು ಮಸೀದಿಗಳಾಗಿ ಪರಿವರ್ತನೆ ಹೊಂದಿದವು” ಎಂದರು.

- Advertisement -

”ಉತ್ತರ ಭಾರತದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಆದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರವಾದ ನೆಲೆ ಇಲ್ಲ. ಉತ್ತರ ಭಾರತದ ಜನರು ಇಂದಿಗೂ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬರುತ್ತಿರುವುದು ಇದಕ್ಕೆ ಕಾರಣ”ಎಂದು ಹೇಳಿದರು.

Join Whatsapp