ನೀರು ಕೇಳಿದ್ದಕ್ಕೆ ಕೊಲೆ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೆ ಚೂರಿ ಇರಿದ ಆಟೋ ಚಾಲಕ

Prasthutha|

ಬೆಂಗಳೂರು: ‘ಮಗಾ ಸ್ವಲ್ಪ ಕುಡಿಯಲು ನೀರು ಕೊಡು’ ಎಂದದಕ್ಕಾಗಿ ಮುಸ್ಲಿಂ ಯುವಕನೊಬ್ಬನನ್ನು ಅಜಯ್ ಎಂಬಾತ ಕೊಲೆ ಮಾಡಿದ ಘಟನೆ ನಗರದ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಕೊಲೆಯಾದ ಯುವಕನನ್ನು ಆಟೋ ಚಾಲಕ ಸಿದ್ದಿಕ್ (25) ಎಂದು ಗುರುತಿಸಲಾಗಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿದ ಆರೋಪಿ ಅಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಿಕ್ ಹಾಗೂ ಅಜಯ್ ಪರಿಚಿತರು. ಸಣ್ಣ–ಪುಟ್ಟ ಕಾರಣಕ್ಕೂ ಆಗಾಗ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಇಬ್ಬರೂ ಭೇಟಿಯಾಗಿದ್ದರು. ಇದೇ ವೇಳೆ ಸಿದ್ದಿಕ್, ‘ಮಗಾ ಸ್ವಲ್ಪ ಕುಡಿಯಲು ನೀರು ಕೊಡು’ಎಂದಿದ್ದರು. ಅಷ್ಟಕ್ಕೆ ಕೋಪಗೊಂಡ ಅಜಯ್, ‘ನನಗೆ ಮಗಾ ಎನ್ನುತ್ತಿಯಾ’ ಎಂದು ಜಗಳ ಶುರು ಮಾಡಿದ್ದು, ನಂತರ ಚಾಕುವಿನಿಂದ ಹಲವು ಬಾರಿ ಇರಿದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದ ಸಿದ್ದಿಕ್ ನನ್ನು ಸ್ಥಳಿಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ. ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.



Join Whatsapp