ಬಜರಂಗದಳದ ಕಾರ್ಯಕರ್ತನ ಮೇಲೆ ತಲವಾರು ದಾಳಿಗೆ ಯತ್ನ

Prasthutha|

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಮೇಲೆ ತಲವಾರು ದಾಳಿ ಯತ್ನ ನಡೆಸಿರುವ ಘಟನೆ ಶಿವಮೊಗ್ಗದ ಸಾಗರ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

- Advertisement -

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಆತನ ಪರಿಚಯಸ್ಥನೇ ಆಗಿರುವ ಸಮೀರ್ ದಾಳಿಗೆ ಯತ್ನಿಸಿದ್ದಾನೆ. ಆದರೆ ದಾಳಿ ಗುರಿ ತಪ್ಪಿದ್ದರಿಂದ ಸುನೀಲ್ ಬಚಾವಾಗಿದ್ದಾನೆ. ಈ ಬಗ್ಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನೀಲ್ ಮತ್ತು ಸಮೀರ್ ಸಾಗರ ಸಮೀಪದ ನೆಹರೂ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.

- Advertisement -

ವಿಷಯ ತಿಳಿಯುತ್ತಿದ್ದಂತೆ ಸಂಘಪರಿವಾರದ ಕಾರ್ಯಕರ್ತರು, ಸಾಗರ ಟೌನ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.

ಭಾನುವಾರ ಶಿಮಮೊಗ್ಗದಲ್ಲಿ ಬಜರಂಗದಳದಿಂದ ಶೌರ್ಯ ಪಥ ಸಂಚಲನ ನಡೆದಿತ್ತು. ಈ ವೇಳೆ ಸುನಿಲ್ ಯಾತ್ರೆ ಮುಗಿಸಿ ಹೋಗುವಾಗ ಸಮೀರ್ ಜೊತೆ ಕಿರಿಕ್ ಮಾಡಿದ್ದಾನೆ. ಇಂದು ಬೆಳಗ್ಗೆ ಸುನೀಲ್ ತನ್ನ ಕಚೇರಿ ಬಳಿಯಿಂದ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಸಮೀರ್ ದಾಳಿಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

Join Whatsapp