ಬಿಎಂಎಸ್ ಟ್ರಸ್ಟ್’ನ ಅಕ್ರಮ ನಿರ್ಧಾರಗಳನ್ನು ಸಕ್ರಮಗೊಳಿಸಿದ್ದು ಯಾರ ಹಿತಾಸಕ್ತಿ ಕಾಪಾಡಲು, ಅಶ್ವತ್ಥನಾರಾಯಣ ಅವರೆ?: ಜೆಡಿಎಸ್

Prasthutha|

ಬೆಂಗಳೂರು: BMS ಟ್ರಸ್ಟ್ ನಲ್ಲಿ ನಡೆದಿರುವ ಗೋಲ್ ಮಾಲ್ ಬಗ್ಗೆ 2022ರ ಸೆಪ್ಟೆಂಬರ್ 22, 23ರಂದು ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಮಾತನಾಡಿ, ತನಿಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಸುದೀರ್ಘವಾದ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆಗೆ ವಿನಂತಿಸಿದ್ದಾರೆ. 1957ರಲ್ಲಿ ರಚನೆಯಾಗಿ ನೋಂದಣಿಯಾದ BMS ಟ್ರಸ್ಟ್’ನ ಮೂಲ ಡೀಡನ್ನು ಬದಲಾಯಿಸುವ ತಿದ್ದುಪಡಿಗೆ ಅನುಮೋದನೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ಸಮರ್ಪಕ ಉತ್ತರವನ್ನೇ ಈವರೆಗೂ ನೀಡಿಲ್ಲ. 2018ರಲ್ಲಿ ಕುಮಾರಸ್ವಾಮಿ ಸಿಎಂ ಯಾಗಿದ್ದಾಗ ಈ ತಿದ್ದುಪಡಿಯನ್ನು ತಿರಸ್ಕರಿಸಲಾಗಿತ್ತು ಎಂದು ಜೆಡಿಎಸ್ ಹೇಳಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ದಾನಿ ಟ್ರಸ್ಟ್, ಆಜೀವ ಟ್ರಸ್ಟ್ ನೇಮಕಾತಿ ಬಗ್ಗೆ BMS ಟ್ರಸ್ಟ್ ನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳನ್ನು ಅಕ್ರಮ ಎಂದಿತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರ. ಅಕ್ರಮ ನಿರ್ಧಾರಗಳನ್ನು ಸಕ್ರಮಗೊಳಿಸಿದ್ದು ಯಾರ ಹಿತಾಸಕ್ತಿ ಕಾಪಾಡಲು, ಅಶ್ವತ್ಥನಾರಾಯಣ ಅವರೆ? ಪ್ರಧಾನಿ ನರೇಂದ್ರ ಮೋದಿಯವರೆ, ಭ್ರಷ್ಟಾಚಾರ ನಿರ್ಮೂಲನೆ ಎಂದರೆ ಇದೆಯೆ? ಎಂದು ಜೆಡಿಎಸ್ ಪ್ರಶ್ನಿಸಿದೆ.


ಶಿಕ್ಷಣ ಸಂಸ್ಥೆಯ ಟ್ರಸ್ಟ್’ನಲ್ಲಿ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ, ಮದನ್ ಗೋಪಾಲ್ ಅವರು BMS ಟ್ರಸ್ಟ್ ನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ಬರೆದ ಪತ್ರಗಳು ಕಸದ ಬುಟ್ಟಿ ಕಂಡಿದ್ದು ಏಕೆ? ಪ್ರಧಾನಿಗೆ ಬರೆದ ಪತ್ರದಲ್ಲಿ ಇಂಚಿಂಚೂ ದಾಖಲೆಗಳನ್ನು ವಿವರಿಸಲಾಗಿದೆ ಎಂದು ಜೆಡಿಎಸ್ ಹೇಳಿದೆ.
ಸರ್ಕಾರಿ ಸ್ವತ್ತಾದ BMS ಟ್ರಸ್ಟ್ ನ್ನು ಹೀಗೆ ಖಾಸಗಿ ವ್ಯಕ್ತಿಗಳಿಗೆ ಧಾರೆ ಎರೆದು ಕೊಡುತ್ತಿರುವುದು ಏಕೆ? ಸಾರ್ವಜನಿಕರಿಗೆ ಸೇರಬೇಕಿದ್ದ ಶಿಕ್ಷಣ ಸಂಸ್ಥೆ, ಮತ್ತದರ ಸಾವಿರಾರು ಕೋಟಿ ಆಸ್ತಿಯನ್ನು ಲಪಟಾಯಿಸುವ ಉದ್ದೇಶವಲ್ಲದೆ ಮತ್ತೇನು? ಸರ್ಕಾರದ ಜತೆ ಹಲವರು ಕೊಟ್ಟ ಕಾಣಿಕೆಯಿಂದ ಬೆಳೆದ ಸಂಸ್ಥೆಯನ್ನು ಖಾಸಗಿ ಟ್ರಸ್ಟ್ಆಗಿ ಬದಲಿಸಿದ್ದೇಕೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಟ್ರಸ್ಟ್’ ಗೆ ದಯಾನಂದ ಪೈ ಅವರನ್ನು ಆಜೀವ ಸದಸ್ಯರಾಗಿ ಹೇಗೆ ಕೂರಿಸಿದ್ರಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ನ್ಯಾಯಾಂಗ ತನಿಖೆಯಾಗಲೇಬೇಕು. ಖಾಸಗಿ ರಿಯಲ್ ಎಸ್ಟೇಟ್ ಕುಳಗಳ ಪಟ್ಟಭದ್ರ ಹಿತಾಸಕ್ತಿಗೆ ನೆರವಾಗಲು ಈ ಷಡ್ಯಂತ್ರ ನಡೆದಿದೆ. ಇದಕ್ಕೆ ಸಚಿವ ಅಶ್ವತ್ಥನಾರಾಯಣ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಹಕಾರ ನೀಡಿದ್ದು ನಾಚಿಕೆಗೇಡಿನ ವಿಷಯ ಎಂದು ಜೆಡಿಎಸ್ ಟ್ವೀಟ್ ಮಾಡಿ ಹರಿಹಾಯ್ದಿದೆ.



Join Whatsapp