ಮೊಹಾಲಿ ಸ್ಫೋಟ “ಹೇಡಿತನದ ಪರಮಾವಧಿ”ಎಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Prasthutha|

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮೊಹಾಲಿ ಸ್ಫೋಟವನ್ನು “ಹೇಡಿತನದ ಪರಮಾವಧಿ” ಎಂದು ಟೀಕಿಸಿದ್ದು, ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

- Advertisement -

“ಮೊಹಾಲಿ ಸ್ಫೋಟವು ಪಂಜಾಬ್ ನ ಶಾಂತಿಯನ್ನು ಕದಡಲು ಬಯಸುವವರ ಹೇಡಿತನದ ಕೃತ್ಯವಾಗಿದೆ. ಆಮ್ ಆದ್ಮಿ ಪಕ್ಷದ ಪಂಜಾಬ್ ಸರ್ಕಾರವು ಆ ಜನರ ಆಶಯಗಳನ್ನು ಈಡೇರಿಸಲು ಬಿಡುವುದಿಲ್ಲ. ಪಂಜಾಬ್ ನ ಎಲ್ಲಾ ಜನರ ಸಹಕಾರದಿಂದ ಎಲ್ಲಾ ಸಂದರ್ಭಗಳಲ್ಲಿ ಶಾಂತಿ ಕಾಪಾಡಲಾಗುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ” ಎಂದು ಕೇಜ್ರಿವಾಲ್ ಹೇಳಿದರು.

Join Whatsapp