ಪ್ರವೀಣ್ ಹತ್ಯೆ ಆರೋಪಿಗಳ ಸೆರೆ : ಗುತ್ತಿಗಾರಿನಲ್ಲಿ ಹಿಂದುತ್ವ ಗೂಂಡಾಗಳಿಂದ ಅಂಗಡಿಗಳ ಮೇಲೆ ದಾಳಿ, ಲೂಟಿ !

Prasthutha|

ಸುಳ್ಯ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಆರೋಪಿಗಳೆಂದು ಬಿಂಬಿಸಿ ಬಂಧಿಸಲಾಗಿರುವ ಶಫೀಕ್ ಬೆಳ್ಳಾರೆಯವರು ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗಾರಿನ ಅಂಗಡಿ ಸೇರಿದಂತೆ ಐದಾರು ಅಂಗಡಿಗಳ ಮೇಲೆ ಹಿಂದುತ್ವ ಮತಾಂಧರು ದಾಳಿ ಮಾಡಿ, ಲೂಟಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -

ಬಂಧಿತ ಶಫೀಕ್ ಅವರು ಅಬೂಬಕ್ಕರ್ ಬೆಳ್ಳಾರೆ ಎನ್ನುವವರ ಮಾಲೀಕತ್ವದ ಪ್ರಗತಿ ಎಂಟರ್’ಪ್ರೈಸಸ್ ಎಂಬ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಅಡಿಕೆ ಅಂಗಡಿಯ ಮೇಲೆ ದಾಳಿ ಮಾಡಿರುವ ಮತಾಂಧ ಶಕ್ತಿಗಳು ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದ್ದಾರೆ. ಆ ಬಳಿಕ ಪಕ್ಕದಲ್ಲೇ ಇದ್ದ ಚಪ್ಪಲಿ ಅಂಗಡಿಯ ಮೇಲೂ ದಾಳಿ ಮಾಡಿದ ದುಷ್ಕರ್ಮಿಗಳು ಅಲ್ಲಿದ್ದ ಶೂ, ಚಪ್ಪಲಿಗಳನ್ನು ಲೂಟಿ ಮಾಡಿ ಕೆಲ ವಸ್ತುಗಳನ್ನು ಹೊರ ಹಾಕಿ ಬೆಂಕಿ ಹಚ್ಚಿದ್ದಾರೆ.

Join Whatsapp