ಕ್ಷುಲ್ಲಕ ಹೇಳಿಕೆಗಾಗಿ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತನ ಬಂಧನ : ಒಮರ್‌ ಅಬ್ದುಲ್ಲಾ ಆಕ್ರೋಶ

Prasthutha|

ಶ್ರೀನಗರ : ಹೊರಗಿನವರಿಗಿಂತ ಸ್ಥಳೀಯ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಹೆಚ್ಚು ಅರಿವು ಹೊಂದಬಲ್ಲರು ಎಂಬ ಹೇಳಿಕೆಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಬಂಧಿಸಿರುವುದಕ್ಕೆ ನ್ಯಾಶನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಖಂಡಿಸಿದ್ದಾರೆ. ಇದು ಕಡಿವಾಣವಿಲ್ಲದ ಆಡಳಿತಶಾಹಿ ಅಧಿಕಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಯಾವುದೇ ಅಪಾಯವಿಲ್ಲದ ಅಭಿಪ್ರಾಯ ವ್ಯಕ್ತಪಡಿಸಿದಕ್ಕಾಗಿ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕುವುದನ್ನು ಒಪ್ಪಲಾಗದು ಎಂದು ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಸಫಾಪೋರದ ಸಜದ್‌ ರಶಿ ಸೋಫಿ ಎಂಬವರು ಕೆಲವು ದಿನಗಳ ಹಿಂದೆ ನಡೆದ ʼಜನತಾ ದರ್ಬಾರ್‌ʼ ನಲ್ಲಿ ಲೆಫ್ಟಿನೆಂಟರ್‌ ಗವರ್ನರ್‌ ಅವರ ಸಲಹೆಗಾರ ಬಶೀರ್‌ ಖಾನ್‌ ಅವರನ್ನು ಉಲ್ಲೇಖಿಸಿ ಮಾತನಾಡುತ್ತಾ, ಜನರ ಸಮಸ್ಯೆಗಳ ಬಗ್ಗೆ ನೀವು ಸ್ಥಳೀಯರಾಗಿರುವುದರಿಂದ ಕೇಂದ್ರಾಡಳಿತ ಪ್ರದೇಶದಿಂದ ಹೊರಗಿನವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ ಎಂದಿದ್ದರು. ಮನ್ಸ್‌ ಬಲ್‌ ನಲ್ಲಿ ನಡೆದ ಈ ಜನತಾ ದರ್ಬಾರ್‌ ನಲ್ಲಿ ಈ ರೀತಿಯಾಗಿ ಮಾತನಾಡಿದ್ದಕ್ಕೆ ಸಜದ್‌ ಅವರನ್ನು ಬಂಧಿಸಲಾಗಿದೆ.

- Advertisement -

ಗಂಡೆರ್ಬಾಲ್‌ ಜಿಲ್ಲಾಧಿಕಾರಿ, ಉತ್ತರ ಪ್ರದೇಶ ಮೂಲದ ಐಎಎಸ್‌ ಅಧಿಕಾರಿ ಕೃತಿಕಾ ಜ್ಯೋತ್ಸ್ನಾ ಅವರಿಗೆ ಈ ಹೇಳಿಕೆ ಸರಿಬರಲಿಲ್ಲ. ಆಕೆ ಸಜದ್‌ ಅವರ ಹೇಳಿಕೆಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸಜದ್‌ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ಶನಿವಾರ ಅವರಿಗೆ ಜಾಮೀನು ಲಭ್ಯವಾಗಿದೆ.    

Join Whatsapp