ಮ್ಯಾನ್ಮಾರ್ ನಲ್ಲಿ 11 ಮಂದಿ ನಾಗರಿಕರನ್ನು ಸುಟ್ಟು ಕೊಂದ ಸೇನೆ

Prasthutha|

ನಾಯ್ಪಿಡಾವ್: ಮ್ಯಾನ್ಮಾರ್ನ ಸೇನೆಯ ಜುಂಟಾ ಪಡೆಗಳು ಮಂಗಳವಾರ 11 ಅಮಾಯಕ ನಾಗರಿಕರನ್ನು ಜೀವಂತ ಸುಟ್ಟು ಕೊಂದಿರುವ ಘಟನೆ ನಡೆದಿದ್ದು, ಇದು ಬಂಡುಕೋರರ ದಾಳಿಗಳಿಗೆ ಪ್ರತೀಕಾರ ಎಂದು ಹೇಳಲಾಗಿದೆ.

- Advertisement -

 ಸಗಾಯಿಂಗ್ ಪ್ರದೇಶದಲ್ಲಿ ಈ ಹತ್ಯಾಕಾಂಡ ನಡೆದಿದ್ದು, ಘಟನೆಯ ನಂತರದ ಈ ಕುರಿತ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. 

“ಹತ್ಯೆಗೀಡಾದವರು ಬಡ ದಿನಗೂಲಿ ಕಾರ್ಮಿಕರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು” ಎಂದು ಗ್ರಾಮಸ್ಥರೊಬ್ಬರು ಹೇಳಿದರು.

- Advertisement -

“ಇಂದು ಬೆಳಿಗ್ಗೆ ನಾವು ಹಳ್ಳಿಯಿಂದ ಹೊರಗೆ ಬಂದು ನೋಡಿದಾಗ ದಟ್ಟ ಹೊಗೆ ಏಳುವುದನ್ನು ನೋಡಿದೆವು. ನಂತರ ನಾವು ನೋಡಲು ಹಿಂದಿರುಗಿದಾಗ ಪುರುಷರು ಸುಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ” ಎಂದು ಗ್ರಾಮಸ್ಥ ಹೇಳಿದರು.

Join Whatsapp