ಅರಂತೋಡು: ಕೆಪಿಸಿಸಿ ಸದಸ್ಯ ನಂದಕುಮಾರ್ ಭೇಟಿ ಮಾಡಿದ  ಸ್ಫೋರ್ಟ್ಸ್ ಕ್ಲಬ್ ಸದಸ್ಯರು

Prasthutha|

ಸುಳ್ಯ: ಅರಂತೋಡು ಆರ್ಟ್ಸ್ ಎಂಡ್ ಸ್ಫೋರ್ಟ್ಸ್  ಕ್ಲಬ್  ಸದಸ್ಯರು ಕೆಪಿಸಿಸಿ ಸದಸ್ಯ ಎಚ್ ಎಂ.ನಂದಕುಮಾರ್ ಅವರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸಲಾಯಿತು.

- Advertisement -

ಅವರು ಸುಳ್ಯದಿಂದ ಮಡಿಕೇರಿ ತೆರಳುವ ಸಂದರ್ಭದಲ್ಲಿ ಅರಂತೋಡಿಗೆ ಆಗಮಿಸಿದ ಸಂದರ್ಭದಲ್ಲಿ ಕ್ಲಬಿನ ಸದಸ್ಯರು  ಭೇಟಿ ಮಾಡಿ ಅರಂತೋಡು ಆರ್ಟ್ಸ್ ಆ್ಯಂಡ್ ಸ್ಫೋರ್ಟ್ಸ್ ನೋಂದಣಿಗೊಳ್ಳುತ್ತಿದ್ದು ಹಲವಾರು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮವನ್ನು ಅಯೋಜಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಕ್ಲಬಿನ ಸದಸ್ಯರು ವಿವರಿಸಿದಾಗ ನಂದಕುಮಾರ್ ಅವರು ತನ್ನಿಂದ ಆಗುವ ಸಹಾಯವನ್ನು ನೀಡುವ ಭರವಸೆಯನ್ನು ನೀಡಿ ನೊಂದಣಿಗೆ ಆಗುವ ವೆಚ್ಚವನ್ನು  ನೀಡಿ ತೆರಳಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅರಂತೋಡಿನ ಬಾಲಕಿ ಖುಷಿ ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ  ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ತಾಜುದ್ದೀನ್ ಅರಂತೋಡು ಅರಂತೋಡು ಅರ್ಟ್ಸ್ ಎಂಡ್ ಸ್ಫೋರ್ಟ್ಸ್ ಕ್ಲಬ್ ಕಾರ್ಯದರ್ಶಿ  ಫಯಾಜ್ ಪಟೇಲ್, ಸದಸ್ಯ ರಾದ ಶರಪುದ್ದೀನ್ , ಸುಳ್ಯ ವಿಧಾನ ಸಭಾ ಕ್ಷೇತ್ರ  ಎನ್ಎಸ್ ಯು ಐ ಮಾಜಿ ಉಪಾಧ್ಯಕ್ಷ  ಅಶೀಕ್ ಕುಕ್ಕುಂಬಳ, ಜುಬೈರ್, ಮುಹ್ಸೀನ್,  ನೌಫಲ್ ಕುನ್ನಿಲ್ , ಲತೀಫ್ ಮೊಟ್ಟಂಗಾರ್ , ಅಮೀರ್ ಗೂನಡ್ಕ, ಖುಷಿಯವರ ತಂದೆ ಯೋಗಿಶ ತಾಯಿ ರೇಶ್ಮಾ  ಮುಂತಾದವರು ಇದ್ದರು.

Join Whatsapp