ಆರಗ ಜ್ಞಾನೇಂದ್ರ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ; ಬಿ.ಕೆ.ಹರಿಪ್ರಸಾದ್ ಟೀಕೆ

Prasthutha|

ಬೆಂಗಳೂರು:  ಗೃಹ ಸಚಿವ ಅರೆ ಪ್ರಜ್ಞೆ ಜ್ಞಾನೇಂದ್ರ ಅವರಿಗೆ ಹೆಂಡ ಕುಡಿಯುವ ಅಥವಾ ಗಾಂಜಾ ಹೊಡೆಯುವ ಅಭ್ಯಾಸ ಇರಬೇಕು. ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

- Advertisement -

ಸ್ವಾತಂತ್ರ್ಯ  ಉದ್ಯಾನವನದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಇಂತಹವರೆಲ್ಲ ನಮ್ಮ ಗೃಹ ಸಚಿವರು ಆಗಿರುವುದು ದೌರ್ಭಾಗ್ಯ. ಹಿಂದೂ ಬೇರೆ ಹಿಂದುತ್ವ ಬೇರೆ. ಹಿಂದುತ್ವ ಅಂದರೆ ಹಿಂಸೆ ಮತ್ತು ದೌರ್ಜನ್ಯ ಅನ್ನುವುದನ್ನು ತಿಳಿದುಕೊಳ್ಳಿ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ, ಇಂದಿರಾಗಾಂಧಿ ಇವರೆಲ್ಲ ಹಿಂದೂ ಆಗಿದ್ದರು. ಸಹಿಷ್ಣುತೆಯೇ ಹಿಂದೂ ಧರ್ಮ. ಆದರೆ ಗೋಲ್ವಾಲ್ಕರ್ ಆಗಲಿ ಸಾವರ್ಕರ್ ಆಗಲಿ ಹಿಂದೂ ಧರ್ಮ ಅನುಸರಿಸಿಲ್ಲ ಎಂದು ಹೇಳಿದರು.

- Advertisement -

ಧಾರವಾಡದಲ್ಲಿ ಬಡ ವ್ಯಾಪಾರಕ್ಕೆ ಅಡ್ಡಿ ಮಾಡಿದ್ದಾರೆ. ಇದೇ ಮುತಾಲಿಕ್ ಈದ್ಗಾ ಮೈದಾನ ಗಲಾಟೆ ಮಾಡಿದ್ದರು. ಪ್ರಹ್ಲಾದ್ ಜೋಶಿ ಇದರ ಲಾಭ ಪಡೆದು ಕೇಂದ್ರ ಮಂತ್ರಿ ಆಗಿದ್ದಾರೆ. ಆದರೆ ಮುತಾಲಿಕ್ ಗೆ ಯಾವ ಸ್ಥಾನವೂ ಸಿಗಲಿಲ್ಲ.ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಇದೇ ಬಿಜೆಪಿ ನಿಮ್ಮನ್ನು ಜೈಲಿಗೆ ಕಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp