ಆಂಧ್ರಪ್ರದೇಶ: ಕಾರು ಅಪಘಾತದಲ್ಲಿ ಎಂಎಲ್ ಸಿ ಪರ್ವತ ರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು

Prasthutha|

ನೆಲ್ಲೂರು: ಕಾರು ಅಪಘಾತ ಸಂಭವಿಸಿ ವೈಎಸ್ ಆರ್ ಸಿಪಿ ಎಂಎಲ್ ಸಿ ಪರ್ವತ ರೆಡ್ಡಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯಲ್ಲಿ ಎಂಎಲ್ ಸಿ ಅವರ ಪಿಎ ವೆಂಕಟೇಶ್ವರಲು ಎಂಬುವರು ಮೃತರಾಗಿದ್ದಾರೆ.

- Advertisement -

ಈ ಘಟನೆ ಆಂಧ್ರಪ್ರದೇಶದ ಕೊಡವಲೂರು ಮಂಡಲದ ರೇಗಡಿಚೇಲಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಪರ್ವತ ರೆಡ್ಡಿ ತಮ್ಮ ಕಾರಿನಲ್ಲಿ ವಿಜಯವಾಡದಿಂದ ನೆಲ್ಲೂರಿಗೆ ಹೋಗುತ್ತಿದ್ದರು. ಇವರ ಕಾರಿನ ಮುಂದೆ ಲಾರಿಯೊಂದು ಸಂಚರಿಸುತ್ತಿತ್ತು. ಏಕಾಏಕಿ ಚಕ್ರ ಪಂಕ್ಚರ್ ಆಗಿದ್ದರಿಂದ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಪರ್ವತ ರೆಡ್ಡಿ ಅವರ ಪಿಎ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಎಲ್ಸಿ ತಲೆಗೆ ಗಂಭೀರ ಗಾಯಗಳಾಗಿದೆ.

Join Whatsapp