ಮಾಧ್ಯಮಗಳನ್ನು ಬೇ**ರ್ಸಿ ಎಂದು ನಾಲಗೆ ಹರಿಯಬಿಟ್ಟ ಅನಂತ್ ಕುಮಾರ್ ಹೆಗಡೆ

Prasthutha|

ಕಾರವಾರ: ಸಂಸದ ಅನಂತ ಕುಮಾರ್ ಹೆಗಡೆ ಮಾಧ್ಯಮಗಳಿಗೆ ಅಶ್ಲೀಲ ಪದ ಪ್ರಯೋಗಿಸಿಸಿ ನಿಂದಿಸಿದ ಘಟನೆ ಸೋಮವಾರ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದಿದೆ.

- Advertisement -

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಮಾಧ್ಯಮಗಳನ್ನು ಬೇ**ರ್ಸಿ ಎಂದು ಜರೆದಿದ್ದಾರೆ.

ಆ ಪತ್ರಿಕೆಯಲ್ಲಿ ಹಾಗೆ, ಈ ವ್ಯಾಟ್ಸಪ್ ನಲ್ಲಿ ಹೀಗೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಾ ಬೇ**ರ್ಸಿ ಮಾಧ್ಯಮದವರು ಏನಾರ ಬರೆಯಲಿ, ಏನಾದರೂ ಹೇಳಲಿ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

- Advertisement -

ಆನೆ ಹೊಗಿದ್ದೆ ದಾರಿ ಎಂಬಂತೆ ನಾವು ಇರಬೇಕು.ಮಾಧ್ಯಮಗಳು ಏನೂ ಬೆಕಾದ್ರೂ ಬರೆದುಕೊಳ್ಳಲಿ. ಬೇಕಾದ್ರೆ ಬೇ**ರ್ಸಿಗಳು ಏನೂ ಬೇಕಾದ್ರೂ ಒದರಾಡಲಿ. ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದು ಚರ್ಚೆ ಆಗಲಿ. ಎಂದು ಅನಂತ ಕುಮಾರ ಹೆಗಡೆ ನಾಲಗೆ ಹರಿಯಬಿಟ್ಟಿದ್ದಾರೆ.

ಆನೆ ನಡೆದಿದ್ದೆ ದಾರಿ ಎಂಬಂತೆ ನಾವು ನಡಿಯಬೇಕು. ನಾಯಿಗಳು ಬೋಗಳದೇ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಹೆಗಡೆ ಆಕ್ರೋಶಭರಿತರಾಗಿ ದ್ವೇಷದಿಂದಲೇ ಮಾತನಾಡಿದ್ದಾರೆ.

Join Whatsapp