‘ಸ್ವಾತಂತ್ರ್ಯದ ಅಮೃತ ಮಹೋತ್ಸವ’: ಮೂರು ಹಂತಗಳಲ್ಲಿ ಕೈದಿಗಳ ಬಿಡುಗಡೆಗೆ ಯೋಜನೆ

Prasthutha|

ನವದೆಹಲಿ: ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಸರಣಿ ಕಾರ್ಯಕ್ರಮಗಳಾದ ಆಝಾದಿ ಕಾ ಅಮೃತ್ ಮಹೋತ್ಸವ್’ ದ ಅಂಗವಾಗಿ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ ಎ) ಕೆಲವು ವರ್ಗಗಳ ಕೈದಿಗಳಿಗೆ ವಿಶೇಷ ವಿನಾಯಿತಿ ನೀಡಲು ಯೋಜನೆ ಹಾಕಿಕೊಂಡಿದೆ.

- Advertisement -

ವಿಶೇಷ ವಿನಾಯಿತಿ’ ಯೋಜನೆಯಡಿ ದೇಶಾದ್ಯಂತ ಮೂರು ಹಂತಗಳಲ್ಲಿ ವಿಶೇಷ ವರ್ಗದ ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ವರ್ಷದ ಆಗಸ್ಟ್ 15 ರಂದು (ಸ್ವಾತಂತ್ರ್ಯ ದಿನ)  ಮತ್ತು ಜನವರಿ 26, 2023 (ಗಣರಾಜ್ಯೋತ್ಸವ) ಹಾಗೂ, 2023ರ ಸ್ವಾತಂತ್ರ್ಯ ದಿನದಂದು ಕೈದಿಗಳನ್ನು  ಬಿಡುಗಡೆ ಮಾಡಲು ಪ್ರಸ್ತಾಪಿಸಿಸಲಾಗಿದೆ.

Join Whatsapp