ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಂಗಳೂರಿನಲ್ಲಿ ಪಕ್ಷಾತೀತ ನಡಿಗೆ

Prasthutha|

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೋ ನೇತೃತ್ವದಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಬುಧವಾರ ಸ್ವಾತಂತ್ರ್ಯದ ನಡಿಗೆ ನಡೆಯಿತು.

- Advertisement -

ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಯಿಂದ ಆರಂಭಗೊಂಡ ನಡಿಗೆ ಲಾಲ್ ಬಾಗ್ ನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಬಳಿ ನಡಿಗೆಯು ಕೊನೆಗೊಂಡಿತು. ಸ್ವಾತಂತ್ರ್ಯ ನಮನದೊಂದಿಗೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯರನ್ನು ಸ್ಮರಿಸಲಾಯಿತು.

ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾನಿಲಯದ ಉದಯಕುಮಾರ್ ಮಾತನಾಡಿ, ಅಂದಿನ ತ್ಯಾಗ ಮರೆತು ಇಂದು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಸ್ವಾತಂತ್ರ್ಯದ ಆಚರಣೆ ಮುಖ್ಯವಲ್ಲ. ಆ ಕಾಲದ ಹೋರಾಟ, ಸತ್ಯ, ಸತ್ಯಾಗ್ರಹ ಎಲ್ಲಿಗೆ ನಡೆದಿದೆ ಎಂಬುದನ್ನು ಗುರುತಿಸಬೇಕು. ನಮ್ಮ ಯುವಕರಿಗೆ ಅವಕಾಶ ನೀಡದೆ ವಂಚಿಸುವುದನ್ನು ತಪ್ಪಿಸಬೇಕು ಎಂದರು.

- Advertisement -

 ಮುಖಂಡರಾದ ಶಾಹುಲ್ ಹಮೀದ್, ವಿಶ್ವಾಸ್ ದಾಸ್, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ ಜಿ. ಎ. ಬಾವಾ,  ಅಪ್ಪಿ, ರವೂಫ್, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.

Join Whatsapp