ಮಂಗಳೂರು | ತುರ್ತು ಮಾಸ್ಕ್, ಗ್ಲೌಸ್ ಖರೀದಿಗೆ ಎಸ್ ಡಿಆರ್ ಎಫ್ ನಿಧಿ ಹಣ ಬಿಡುಗಡೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಮಾಸ್ಕ್, ಗ್ಲೌಸ್ ಖರೀದಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿದೆ.

- Advertisement -

ಇತ್ತೀಚೆಗೆ ಮಂಗಳೂರು ಪ್ರವಾಸ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಗ್ಲೌಸ್ ಕೊರತೆಯ ವಿಚಾರದಲ್ಲಿ ದ.ಕ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ತುರ್ತು ಮಾಸ್ಕ್ ಗ್ಲೌಸ್ ಖರೀದಿಗೆ ಸೂಚನೆ ನೀಡಿದ್ದರು.

ಈ ಕುರಿತು ಇಂದು ದ.ಕ ಜಿಲ್ಲಾಧಿಕಾರಿಯಿಂದ ಎಸ್ ಡಿಆರ್ ಡಿಎಫ್ ನಿಧಿಯಿಂದ ಹಣ ಬಿಡುಗಡೆಗೊಳಿಸಲಾಯಿತು. ತುರ್ತು ಮಾಸ್ಕ್ ಗ್ಲೌಸ್ ಖರೀದಿಗೆ ರಾಜ್ಯ ಪ್ರಕೃತಿ ವಿಕೋಪ ನಿಧಿಯಿಂದ 16 ಲಕ್ಷ ಬಿಡುಗಡೆಗೊಳಿಸಿ ಈ ಪೈಕಿ ಮಂಗಳೂರು, ಮೂಡಬಿದಿರೆ, ಉಳ್ಳಾಲಕ್ಕೆ ಸೇರಿ 6 ಲಕ್ಷ , ಪುತ್ತೂರು, ಕಡಬಕ್ಕೆ 4 ಲಕ್ಷ, ಬಂಟ್ವಾಳಕ್ಕೆ 2 ಲಕ್ಷ, ಬೆಳ್ತಂಗಡಿಗೆ ಲಕ್ಷ, ಸುಳ್ಯಕ್ಕೆ 2 ಲಕ್ಷ ಒಟ್ಟು 16 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಯಿತು.

- Advertisement -

ಸ್ಥಳೀಯ ಜನರಿಕ್ ಮೆಡಿಕಲ್ಗಳಿಂದ ಮಾಸ್ಕ್, ಗ್ಲೌಸ್ ಖರೀದಿಗೆ ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Join Whatsapp