ಅಮಾನತ್ ಬ್ಯಾಂಕ್ ಚುನಾವಣೆ: ಎಲ್ಲರಿಗೂ ಮತದಾನ ಹಕ್ಕು ನೀಡಲು ಹೈಕೋರ್ಟ್ ಗೆ ಅರ್ಜಿ

Prasthutha|

ಬೆಂಗಳೂರು: ಅಮಾನತ್ ಬ್ಯಾಂಕ್ ನ ಪದಾಧಿಕಾರಿಗಳಗಳ ಚುನಾವಣೆಯಲ್ಲಿ ರಾಜ್ಯದ ಎಲ್ಲ ಬ್ಯಾಂಕ್ ಖಾತೆದಾರ ಸದಸ್ಯರಿಗೆ ಮತದಾನ ಚಲಾಯಿಸಲು ಅವಕಾಶ ನೀಡಬೇಕೆಂದು ರಾಜ್ಯ ಹೈಕೋರ್ಟ್ ಗೆ ಮೊರೆ ಹೋಗಲಾಗುವುದು ಎಂದು ಸಮಾಜಿಕ ಕಾರ್ಯಕರ್ತ ಆಲಂಪಾಷಾ ತಿಳಿಸಿದರು.

- Advertisement -

ಬೆಂಗಳೂರಿನಲ್ಲಿಂದು ಅಮಾನತ್ ಬ್ಯಾಂಕ್ ನಿಂದ ವಂಚಿತರಾದ ಸದಸ್ಯರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನತ್ ಬ್ಯಾಂಕ್ ನಲ್ಲಿ  ನೂರಾರು ಕೋಟಿ ರೂಪಾಯಿ ಹಗರಣ ನಡೆದಿದ್ದು, ಸಾವಿರಾರು ಮಂದಿ ಮುಸ್ಲಿಂ ಸಮುದಾಯದ ವರು ಮೋಸ ಹೋಗಿದ್ದಾರೆ. ಇದೇ ಸೆಪ್ಟೆಂಬರ್ 18ಕ್ಜೆ ಚುನಾವಣೆ ನಡೆಯಲಿದ್ದು. ರಾಜ್ಯದ ಎಲ್ಲ ಮುಸ್ಲಿಂ ಬ್ಯಾಂಕ್ ಖಾತೆದಾರರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಮತದಾನಕ್ಕೆ ಅವಕಾಶ ನೀಡಬೇಕು.  ಈ ನೂರಾರು ಕೋಟಿ ಹಗರಣ ನಡೆಸಿದ ಪದಾಧಿಕಾರಿಗಳು ಮತ್ತೆ ಆಯ್ಕೆಯಾಗುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಈ ಹಿನ್ನಲೆಯಲ್ಲಿ ಎಲ್ಲರಿಗೂ ಮತದಾನ ಮಾಡುವ ಅವಕಾಶ  ನೀಡಬೇಕೆಂದು ಆಗ್ರಹಿಸಿದರು.

ಇಂದು ಬ್ಯಾಂಕ್ ಖಾತೆದಾರರು, ಸದಸ್ಯರ ಸಭೆಯಲ್ಲಿ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಕುರಿತು ಚರ್ಚೆ ನಡೆಸಲಾಗಿದೆ. ಎರಡು ಮೂರು ದಿನಗಳಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದರು.

Join Whatsapp