ಅಮಾನತ್ ಬ್ಯಾಂಕ್ ಚುನಾವಣೆ; ಒಂಬತ್ತು ಮಂದಿ ನಿರ್ದೇಶಕರ ಆಯ್ಕೆ

Prasthutha|

ಬೆಂಗಳೂರು: ಅಮಾನತ್ ಕೋ ಅಪರೇಟಿವ್ ಬ್ಯಾಂಕ್ ಚುನಾವಣೆ ಭಾನುವಾರ ನಡೆದಿದ್ದು, ಒಟ್ಟು 9 ಮಂದಿಯ ನೂತನ ನಿರ್ದೇಶಕರು ಆಯ್ಕೆಗೊಂಡಿದ್ದಾರೆ. ಹನ್ನೊಂದು ಮಂದಿ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆದಿದ್ದು. ಇಬ್ಬರು ಎಸ್.ಸಿ.ಎಸ್.ಟಿ ಕೋಟಾದಡಿಯ ನಿರ್ದೇಶಕರು ಅವಿರೋಧವಾಗಿ ಆಯ್ಜೆಯಾಗಿದ್ದಾರೆ.

- Advertisement -


ಭಾನುವಾರ ನಡೆದ ಚುನಾವಣೆಯಲ್ಲಿ ಅಬ್ದುಲ್ ಅಝೀಮ್ ಬಿ.ಕೆ. ಅಬ್ದುಲ್ ರಪೀಕ್. ಎ. ರಿಜ್ವಾನ್ ಎಂ.ಕೆ. ರಿಯಾಝ್ ಅಹಮದ್ ಎಂ.ಕೆ. ರೆಹಮತ್ ಉಲ್ಲಾಖಾನ್, ಷಫಿ.ಎಂ.ಡಿ., ಸೈಯದ್ ನವೀದ್ ಅಹಮದ್, ಮಹಿಳಾ ಮೀಸಲಾತಿ ಯಲ್ಲಿ ರಶೀದ್ ಬೇಗಂ, ಸೈಯದ್ ಬಾನು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಕೆ.ಸಲೀಮ್ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಅಲಂ ಪಾಷಾ ಅವರ ತಂಡಕ್ಕೆ ಸೋಲುಂಟಾಗಿದೆ.


ಅಮಾನತ್ ಕೋ ಅಪರೇಟಿವ್ ಬ್ಯಾಂಕ್ 1970 ರಲ್ಲಿ ಸ್ಥಾಪನೆಯಾಗಿದ್ದು, ಅಮಾನತ್ ಕೋ ಅಪರೇಟಿವ್ ಬ್ಯಾಂಕ್ ರಾಜ್ಯಾದ್ಯಂತ ಹರಡಿಕೊಂಡಿದೆ. ಬೆಳಗಾವಿಯಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಮಂಗಳೂರು, ಮೈಸೂರು, ಕಲಬುರಗಿ, ಚೆನ್ನಪಟ್ಟಣದಲ್ಲಿ ಶಾಖೆಗಳನ್ನು ಹೊಂದಿದೆ.

Join Whatsapp