ಸುರಂಗದಿಂದ ಹೊರಬಂದ ಎಲ್ಲಾ ಕಾರ್ಮಿಕರು ಆರೋಗ್ಯವಾಗಿದ್ದಾರೆ: ಏಮ್ಸ್

Prasthutha|

ಋಷಿಕೇಶ: ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಮಂದಿ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಅವರನ್ನು ಯಾವಾಗ ಮನೆಗೆ ವಾಪಸ್ ಕಳುಹಿಸಬಹುದು ಎನ್ನುವ ಬಗ್ಗೆ ಇಂದು ನಿರ್ಧಾರವಾಗಲಿದೆ ಎಂದು ಏಮ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಸಿಇಒ ಮೀನು ಸಿಂಗ್ ಹೇಳಿದ್ದಾರೆ.

- Advertisement -

ಎಲ್ಲರೂ ಸ್ವಸ್ಥರಾಗಿದ್ದಾರೆ, ಅವರನ್ನು ರೋಗಿಗಳು ಎಂದು ಕರೆಯಲು ಇಷ್ಟಪಡುವುದಿಲ್ಲ. ಅವರ ರಕ್ತದೊತ್ತಡ, ಜೀವಸತ್ವಗಳು, ಉಸಿರಾಟ ಎಲ್ಲವೂ ಸಹಜವಾಗಿಯೇ ಇದೆ. ಅಲ್ಲದೆ ಹೃದಯದ ಆರೋಗ್ಯವನ್ನು ಪರೀಕ್ಷಿಸಲು ಇಸಿಜಿಯನ್ನು ಸಹ ಮಾಡುತ್ತೇವೆ ಮೀನು ತಿಳಿಸಿದ್ದಾರೆ.



Join Whatsapp