ಅಲಿಘಡ ಇನ್ನು ಮುಂದೆ ಹರಿಘಡ !

Prasthutha|

► ಉ.ಪ.ದಲ್ಲಿ ಮುಂದುವರಿದ ಹೆಸರು ಬದಲಾವಣೆ ಚಾಳಿ

- Advertisement -

ಲಕ್ನೋ: ಉತ್ತರ ಪ್ರದೇಶದ ಅಲಿಘಡದ ಹೆಸರನ್ನು ಹರಿಘಡವಾಗಿಯೂ, ಮೈನ್ ಪುರಿಯನ್ನು ಮಾಯನ್ ನಗರವಾಗಿ ಮರು ನಾಮಕರಣ ಮಾಡಲು ಸ್ಥಳೀಯ ಜಿಲ್ಲಾ ಪಂಚಾಯತ್ ತೀರ್ಮಾನ ತೆಗೆದುಕೊಳ್ಳುವ ಮೂಲಕ ಹಳೆಯ ಹೆಸರುಗಳನ್ನು ಬದಲಿಸುವ ಬಿಜೆಪಿ ಚಾಳಿ ಮುಂದುವರಿದಿದೆ.


ಈ ಜಿಲ್ಲಾ ಪಂಚಾಯತುಗಳಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಮಂಗಳವಾರ ಈ ತೀರ್ಮಾನ ತೆಗೆದುಕೊಂಡಿದೆ.
ಬ್ರಜ್ ಪ್ರಾಂತ್ ಬಿಜೆಪಿಯ ಅಧ್ಯಕ್ಷ ಶ್ಯೋರಾಜ್ ಸಿಂಗ್ ರ ಪತ್ನಿ ವಿಜಯಾ ಸಿಂಗ್ ಆಲಿಗಡ ಜಿಲ್ಲಾ ಪಂಚಾಯತಿನ ಅಧ್ಯಕ್ಷೆಯಾಗಿದ್ದಾರೆ.

- Advertisement -


ಮೈನ್ ಪುರಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಅರ್ಚನಾ ಬದೌರಿಯಾ ನಾಯಕತ್ವದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸದಸ್ಯರು ಇದೇ ಮಾದರಿಯ ತೀರ್ಮಾನ ತೆಗೆದುಕೊಂಡಿದ್ದಾರೆ. ಮಾಯನ್ ಋಷಿಯ ಹೆಸರನ್ನು ಮೈನ್ ಪುರಿಗೆ ಇಡಲು ಕಾರಣವನ್ನು ನೀಡಲಾಗಿದೆ. ಇಲ್ಲಿ ಪ್ರತಿಪಕ್ಷಗಳು ವಿರೋಧ ತೋರಿದರೂ ತೀರ್ಮಾನವು 19- 11 ಮತಗಳಿಂದ ಸ್ವೀಕೃತವಾಯಿತು. ಈ ಹೆಸರು ಬದಲಾವಣೆ ರಾಜಕೀಯವೆಲ್ಲ ಚುನಾವಣೆಗೆ ಮೊದಲು ನಡೆಯುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

Join Whatsapp