ಉತ್ತರ ಪ್ರದೇಶದಲ್ಲಿ ಅಖಿಲೇಶ್ ತಂತ್ರಗಳು ಫಲ ನೀಡುತ್ತಿದೆ; ಬಿಜೆಪಿಯಿಂದ ಸಮಾಜವಾದಿಗೆ ಸೇರಿದ ಮಯಾಂಕ್ ಜೋಶಿ

Prasthutha|

ಲಕ್ನೋ: ವ್ಯಾಪಕ ವದಂತಿಗಳ ಬಳಿಕ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮಗ ಮಯಾಂಕ್ ಜೋಶಿ ಅಜಮ್ ಘರ್ ನಲ್ಲಿ ನಡೆದ ಸಮಾಜವಾದಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ.

- Advertisement -

ಮಯಾಂಕ್ ಜೋಶಿ ಸಮಾಜವಾದಿ ಪಕ್ಷಕ್ಕೆ ಸೇರುವ ಬಗ್ಗೆ ಮುನ್ಸೂಚನೆಗಳಿದ್ದು, ಬಿಜೆಪಿ ಯಲ್ಲಿ ಸ್ಥಾನ ನೀಡುವಂತೆ ರೀಟಾ ಜೋಶಿ ಬಿಜೆಪಿ ನಾಯಕರಲ್ಲಿ ಕೇಳಿಕೊಂಡಿದ್ದರು. ಆದರೆ ಬೇಡಿಕೆಯನ್ನು ಸ್ವೀಕರಿಸದ ಕಾರಣ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೀಟಾ ‘ಮಯಾಂಕ್ ಫೆಬ್ರವರಿ 22 ರಂದು ಅಖಿಲೇಶ್ ಯಾದವ್ ರನ್ನು ಭೇಟಿಮಾಡಿದ್ದರು. ಆದರೆ ತಾನು ಬಿಜೆಪಿಯಲ್ಲಿಯೇ ಉಳಿಯುತ್ತೇನೆ ಮತ್ತು ರಾಷ್ಟ್ರೀಯ ನಾಯಕತ್ವದ ಮೇಲೆ ನಂಬಿಕೆ ಹೊಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ .

- Advertisement -

ಈ ಮಧ್ಯೆ ಮಾಯಾಂಕ್ ಸಮಾಜವಾದಿ ಪಕ್ಷಕ್ಕೆ ಸೇರಿರುವುದು ಬಿಜೆಪಿಗೆ ಅತ್ಯಂತ ಆಯಾಸವನ್ನುಂಟುಮಾಡಿದೆ.

Join Whatsapp