ಈ ಬಾರಿಯ ದೀಪಾವಳಿ ಆಚರಣೆಯೊಂದಿಗೆ ಬಿಜೆಪಿ ಆಡಳಿತ ಅಂತ್ಯ: ಅಖಿಲೇಶ್ ಯಾದವ್

Prasthutha|

ಲಕ್ನೋ: ಈ ಬಾರಿಯ ದೀಪಾವಳಿ ಆಚರಣೆಯು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ದುರಾಡಳಿತವನ್ನು ಅಂತ್ಯಗೊಳಿಸಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement -

ದೀಪಾವಳಿ ಮತ್ತು ಗೋವರ್ಧನ್ ಪೂಜಾ ಶುಭಾಶಯ ಕೋರಿದ ಅಖಿಲೇಶ್, ಭಾರತದಲ್ಲಿ ಆಚರಣೆಗಳು ಸೌಹಾರ್ದ, ಶಾಂತಿ ಮತ್ತು ಪರಸ್ಪರ ಪ್ರೀತಿಯ ಸಂದೇಶವನ್ನು ಹರಡುತ್ತವೆ. ಈ ದೀಪಾವಳಿಯು ಕೂಡಾ ಅದೇ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.

ಬಿಜೆಪಿಯ ಕರಾಳ ಕಾನೂನುಗಳಿಂದ ರೈತರು, ನಿರುದ್ಯೋಗಿಗಳು, ಬಡವರು, ಯುವಕರ ಬದುಕು ದುಸ್ತರವಾಗಿದ್ದು, ಈ ದೀಪಾವಳಿ ವೇಳೆಗೆ ಎಲ್ಲ ದೀಪಗಳೂ ಬೆಳಕನ್ನು ಚೆಲ್ಲಿ ದುರಾಡಳಿತ ಕೊನೆಗೊಳ್ಳಲಿ ಎಂದು ಅವರು ಹಾರೈಸಿದ್ದಾರೆ.



Join Whatsapp