ಅಜ್ಮೀರ್ ದರ್ಗಾಕ್ಕೆ ಚಾದರ ಅರ್ಪಿಸಿದ “ಮಹಾ” ಮುಖ್ಯಮಂತ್ರಿ ಶಿಂಧೆ

Prasthutha|

- Advertisement -

ಅಜ್ಮೀರ್: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ರಾಜಸ್ಥಾನದ ಅಜ್ಮೀರ್‌ ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದಲ್ಲಿ ಚಾದರ್ ಅರ್ಪಿಸಿದ್ದಾರೆ.

ಖಾದಿಮ್ ಸೈಯದ್ ವಲಿ ಮುಹಮ್ಮದ್ ನಿಯಾಜಿ ಅವರು ಶಿಂಧೆ ಪರವಾಗಿ ಚಾದರ್ ಮತ್ತು ಹೂವುಗಳನ್ನು ಅರ್ಪಿಸಿದರು.

- Advertisement -

ಬಳಿಕ ಮಾತನಾಡಿದ ಖಾದಿಮ್ ನಿಯಾಜಿ ಅವರು, ಮುಖ್ಯಮಂತ್ರಿಯಾದ ಮೇಲೆ ಅವರ ಸೂಚನೆಯಂತೆ ಇಂದು ಚಾದರ ಅರ್ಪಿಸಿ ಎಲ್ಲ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಶಿಂಧೆ ಸಾಹಬ್ ಗರೀಬ್ ನವಾಜ್ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ಇಲ್ಲಿಗೆ ಬರುತ್ತಿದ್ದರು ಎಂದು ಹೇಳಿದರು.



Join Whatsapp