ಶಾರ್ಜಾಕ್ಕೆ ಹೊರಟಿದ್ದ ಮಹಿಳೆಗೆ ವಿಮಾನದಲ್ಲಿ ಹೃದಯಾಘಾತ : ಮಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಆದ ಏರ್ ಇಂಡಿಯಾ ವಿಮಾನ

Prasthutha|

ಮಂಗಳೂರು : ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಹೊರಟಿದ್ದ ವಿಮಾನದಲ್ಲಿದ್ದ ಮಹಿಳೆಗೆ ಹೃದಯಾಘಾತವಾಗಿದ್ದು, ಕೂಡಲೇ ತುರ್ತು ಚಿಕಿತ್ಸೆಗಾಗಿ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾನದಲ್ಲಿ ಇಳಿಸಲಾಗಿದೆ.

- Advertisement -

ದುಬೈನ ಶಾರ್ಜಾಕ್ಕೆ ಹೊರಟಿದ್ದಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಗೆ ತೀವ್ರ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನರಿತ ವಿಮಾನದ ಸಿಬ್ಬಂದಿಗಳು ಕ್ಷಿಪ್ರವಾಗಿ ವಿಮಾನವನ್ನು ಮಂಗಳೂರಿನಲ್ಲಿ ಇಳಿಸುವ ಕುರಿತು ಸಮಾಲೋಚಿಸಿದ್ದರು.  ಮೂರು ಮಕ್ಕಳ ತಾಯಿಯಾಗಿರುವ ಮಹಿಳೆ, ಪತಿಯೊಂದಿಗೆ ಶಾರ್ಜಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಡಿಸಂಬರ್ 3 ರಂದು ಈ ಘಟನೆ ವರದಿಯಾಗಿದೆ.  

ಮಂಗಳೂರಿನಲ್ಲಿ ಲ್ಯಾಂಡ್ ಆದ ತಕ್ಷಣ ಮಹಿಳೆಯನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಕೂಡಾ ಮಹಿಳೆಯ ಕುಟುಂಬದ ಜೊತೆಗೆ ಸಾತ್ ನೀಡಿದ್ದರು. ಚಿಕಿತ್ಸೆಯ ಬಳಿಕ ವೈದ್ಯರು ಮಹಿಳೆಯ ಸ್ಥಿತಿ ಸುಧಾರಿಸಿದ್ದು, ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಖಚಿತಪಡಿಸಿದರು. ಅದರಂತೆ, ಮಹಿಳೆ ಮತ್ತು ಪತಿಯನ್ನು ಅದೇ ದಿನ ರಾತ್ರಿ 11 ಗಂಟೆಗೆ ಶಾರ್ಜಾಕ್ಕೆ ಕರೆದೊಯ್ಯಲು ವಿಮಾನ ನಿಲ್ದಾಣದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿದ್ದಾರೆ.

Join Whatsapp