ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ಲಾರಿ: ನಾಲ್ವರು ಮೃತ್ಯು, ಐವರು ಗಂಭೀರ !

Prasthutha|

ಶಿವಮೊಗ್ಗ: ಲಾರಿಯೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ನಾಲ್ವರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಗುಂಬೆ ಘಾಟಿಯ 5 ನೇ ತಿರುವು ಬಳಿ ಶುಕ್ರವಾರ ನಡೆದಿದೆ.

- Advertisement -


ಮೃತಪಟ್ಟವರೆಲ್ಲರೂ ಕಾರ್ಕಳ ತಾಲೂಕಿನ ಮಿಯ್ಯಾರು ಮೂಲದವರು ಎಂದು ತಿಳಿದು ಬಂದಿದೆ.


ಹೆಬ್ರಿ ಲಿಮಿಟೆಡ್ ಗೆ ಸೇರಿದ ಈಚರ್ ವಾಹನ ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿತ್ತು.ಈ ವೇಳೆ ಘಾಟ್ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಹೆಬ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp