ಭಾರೀ ಗದ್ದಲದ ನಡುವೆ ರಾಜ್ಯ ಸಭೆಯಲ್ಲಿ ಕೃಷಿ ಕಾಯ್ದೆ ವಾಪಸು ಮಸೂದೆ ಪಾಸು

Prasthutha|

ನವದೆಹಲಿ: ರಾಜ್ಯ ಸಭೆಯ ಕಲಾಪ ಮಧ್ಯಾಹ್ನ ಸಮಾವೇಶಗೊಳ್ಳುತ್ತಲೇ ಮೂರು ವಿವಾದಿತ ಕೃಷಿ ಕಾಯ್ದೆಯನ್ನು ವಾಪಸು ಪಡೆಯುವ ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ಇದರ ನಡುವೆ ಚರ್ಚೆ ನಡೆಯಲಿ ಎಂದು ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು. ಗದ್ದಲ, ಕೋಲಾಹಲದ ನಡುವೆ ಮಸೂದೆ ಅಂಗೀಕಾರಗೊಂಡಿದೆ ಎಂದು ಸಭಾಪತಿ ಘೋಷಿಸಿದರು.

- Advertisement -


ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆಗೆ ಬೆಂಬಲ ನೀಡುವಂತೆ ಕೇಳಿಕೊಂಡರು. ಮೊದಲು ಚರ್ಚೆ ನಡೆಯಲಿ ಎಂದು ಪ್ರತಿಪಕ್ಷದವರು ಒತ್ತಾಯಿಸಿದರು. ಆದರೆ ಸರ್ಕಾರ ಚರ್ಚೆಗೆ ಸಿದ್ಧವಿರಲಿಲ್ಲ.

Join Whatsapp