ಅಡ್ಯಾರುಪದವು: ಮುಸ್ಲಿಮ್ ಆಟೋ ಚಾಲಕನ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ

Prasthutha|

ಮಂಗಳೂರು: ಮುಸ್ಲಿಮ್ ಯುವಕನ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ ನಡೆಸಿರುವ ಘಟನೆ ಅಡ್ಯಾರುಪದವು ಬಳಿ ಶುಕ್ರವಾರ ಸಂಜೆ ನಡೆದಿದೆ.

- Advertisement -

ಮಾರಣಾಂತಿಕ ದಾಳಿಯಿಂದಾಗಿ ಅಡ್ಯಾರುಪದವು ನಿವಾಸಿ ಅಬ್ದುಲ್ ರಝಾಕ್ (38) ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ರಝಾಕ್ ಅವರು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

- Advertisement -

ಅಬ್ದುಲ್ ರಝಾಕ್ ಅವರು ಬಿತ್ತ್ ಪಾದೆ ಪಡು ಪರಿಸರದಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಬಜರಂಗ ದಳದ ಜೀವನ್, ಕಿಶೋರ್, ಸುಜಿತ್ , ಗಣೇಶ್ ಹಾಗೂ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಝಾಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Join Whatsapp