ಮಂಗಳೂರು | ದಸರಾ ಮೆರವಣಿಗೆಯಲ್ಲಿ ಬುಲ್ಡೋಜರ್ ಜೊತೆ ಆದಿತ್ಯನಾಥ್ ವೇಷ: ವ್ಯಾಪಕ ಆಕ್ರೋಶ

Prasthutha|

ಮಂಗಳೂರು: ದಸರಾ ಮೆರವಣಿಗೆಯಲ್ಲಿ ಯುಪಿ ಮಾಡೆಲ್ ಎಂದು ಬಿಂಬಿಸಿ ಬುಲ್ಡೋಜರ್ ಜೊತೆ ಯುಪಿ ಸಿಎಂ ಆದಿತ್ಯನಾಥ್ ಟ್ಯಾಬ್ಲೋವನ್ನು ಪ್ರದರ್ಶಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -


ಪ್ರತಿಭಟನೆ ಮಾಡಿದ ಅಮಾಯಕ ಮುಸ್ಲಿಮರ ಮನೆಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೆಲಸಮ ಮಾಡಿದ್ದಾರೆ. ಇದನ್ನೇ ಮಂಗಳೂರಿನ ಟ್ಯಾಬ್ಲೋದಲ್ಲಿ ಪ್ರದರ್ಶಿಸಿ ದ್ವೇಷ ಮೆರೆದಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಜ್ಪೆಯಲ್ಲಿ ದಸರಾ ಮೆರವಣಿಗೆಯಲ್ಲಿ ಇಂತಹ ಟ್ಯಾಬ್ಲೋವನ್ನು ಪ್ರದರ್ಶಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಟ್ಯಾಬ್ಲೋ ಮಾಡಿ ಸಮಾಜದಲ್ಲಿ ಶಾಂತಿ ಕೆಡವಲು ಪ್ರಚೋದಿಸುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೂಡ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.


ಅಲ್ಲದೆ ಈ ಬಗ್ಗೆ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಮಂಗಳೂರಿನ ದಸರಾ ಆಚರಣೆಯಲ್ಲಿ ಯುಪಿ ಮಾಡೆಲ್ ಬುಲ್ಡೋಜರ್ ಬಿಂಬಿಸುವ ಟ್ಯಾಬ್ಲೋ ಪ್ರದರ್ಶಿಸಿ ಕರ್ನಾಟಕದಲ್ಲಿ ಯುಪಿ ಮಾದರಿಯ ಅರಾಜಕತೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಬಿಜೆಪಿ ವಿಕೃತಿ ಮೆರೆದಿದೆ. ನಮ್ಮದು ಸಂವಿಧಾನಿಕ ನ್ಯಾಯ ಆದರೆ ಬಿಜೆಪಿಯದ್ದು ಬುಲ್ಡೋಜರ್ ನ್ಯಾಯ ಎಂದು ಬರೆದುಕೊಂಡಿದೆ.

Join Whatsapp