ಅದಾನಿ ಗ್ರೂಪ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಬೇಕು: ಸುಬ್ರಹ್ಮಣ್ಯ ಸ್ವಾಮಿ

Prasthutha|

ನವದೆಹಲಿ: ‘ಅದಾನಿ ಗ್ರೂಪ್ ಆಸ್ತಿಗಳನ್ನೆಲ್ಲಾ ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಬೇಕು. ಬಂದ ಹಣವನ್ನು ನಷ್ಟ ಅನುಭವಿಸಿದವರಿಗೆ ಸಹಾಯ ಮಾಡಬೇಕು’ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಆಗ್ರಹಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅದಾನಿಯ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವುದಕ್ಕಿಂತ ಬೇರೆ ಪರ್ಯಾಯವಿಲ್ಲ. ಪ್ರಧಾನಿ ಮೋದಿ ಏನನ್ನೋ ಮರೆಮಾಚುತ್ತಿದ್ದಾರೆಂಬ ಅನುಮಾನ ಜನರಲ್ಲಿ ಮೂಡಿದೆ. ಅದನ್ನು ಸರಿಪಡಿಸಬೇಕೆಂದರೆ ಸ್ಪಷ್ಟತೆ ನೀಡಬೇಕು ಎಂದರು.

Join Whatsapp