ವೈಎಸ್ಆರ್ಸಿಪಿ ಪಕ್ಷದ ವಿರುದ್ಧ ಚಪ್ಪಲಿ ಎತ್ತಿ ಅವಾಝ್ ಹಾಕಿದ ನಟ ಪವನ್ ಕಲ್ಯಾಣ್

Prasthutha|

ನವದೆಹಲಿ: ವೈಎಸ್ಆರ್ಸಿಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ನಟ, ರಾಜಕಾರಣಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಅಣಕಿಸಿದವರಿಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಅವಾಝ್ ಹಾಕಿದ್ದಾರೆ.

- Advertisement -

ಗುಂಟೂರಿನ ಮಂಗಳಗಿರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ನಟ ಪವನ್ ಕಲ್ಯಾಣ್ ತಮ್ಮ ಭಾಷಣದ ಮಧ್ಯದಲ್ಲಿ ತಮ್ಮ ಒಂದು ಚಪ್ಪಲಿಯನ್ನು ತೆಗೆದು, ‘ವೈಎಸ್ಆರ್ಸಿಪಿ ಗೂಂಡಾಗಳಿಗೆ’ ಇದು ಬಲವಾದ ಎಚ್ಚರಿಕೆ ಎಂದು ಹೇಳಿದರು. ಮತ್ತೊಮ್ಮೆ ನೀವು ನನ್ನನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆದರೆ, ನಾನು ಈ ಚಪ್ಪಲಿಯಿಂದ ಎಡಬಲ ಬಾರಿಸುತ್ತೇನೆ ಎಂದು ಪವನ್ ಕಲ್ಯಾಣ್ ತಮ್ಮ ಚಪ್ಪಲಿಗಳನ್ನು ಎತ್ತಿ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು ಮತ್ತು ನಟನ ಹೇಳಿಕೆಗೆ ಹರ್ಷೋದ್ಗಾರ ಮಾಡಿದ ಬೆಂಬಲಿಗರು, ವ್ಯಾಪಕ ಬೆಂಬಲ ನೀಡಿದರು.

ಜಗನ್ ರೆಡ್ಡಿ ಅವರ ಪಕ್ಷದ ನಾಯಕರು ನಿಂದನಾತ್ಮಕ ಭಾಷೆಯನ್ನು ಬಳಸುತ್ತಿದ್ದಾರೆ ಮತ್ತು ಜನಪ್ರಿಯ ನಟನ ಆದಾಯದ ಮೂಲಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದೊಂದಿಗೆ ಕೈ ಜೋಡಿಸಿ ಕೆಲಸ ಮಾಡಿದ ಆರೋಪದ ಮೇಲೆ ನಟರನ್ನು ವೈಎಸ್ಆರ್ಸಿಪಿ ಕಾರ್ಯಕರ್ತರು ಟ್ರೋಲ್ ಮಾಡುತ್ತಿದ್ದಾರೆ.

Join Whatsapp