ಜೈಲಿನಿಂದ ಖೈದಿಗಳನ್ನು ಬಿಡುಗಡೆಗೊಳಿಸಿದ ನಟ ದುನಿಯಾ ವಿಜಯ್

Prasthutha|

ಬೆಂಗಳೂರು: ಪ್ರಕರಣವೊಂದರಲ್ಲಿ ಬಂಧನವಾಗಿದ್ದ ತಮ್ಮೂರಿನ ಖೈದಿಗಳನ್ನು ನಟ ದುನಿಯಾ ವಿಜಯ್​ ದಂಡ ಕಟ್ಟಿ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ.

- Advertisement -

ಕುಂಬಾರಹಳ್ಳಿಯಲ್ಲಿ ಯಾವುದೋ ತಪ್ಪಿಗೆ ಜೈಲು ಸೇರಿರುವ ಕೆಲ ಕುಟುಂಬಗಳಿವೆ. ಆ ಕುಟುಂಬದವರು ವಿಜಯ್ ಹತ್ತಿರ ನಮ್ಮ ಮನೆಯವರನ್ನ ಜೈಲಿನಿಂದ ಬಿಡಿಸಿ ಅಂತಾ ಕೇಳಿಕೊಂಡಿದ್ದರು‌. ಅದರಂತೆ ಇಂದು ದುನಿಯಾ ವಿಜಯ್ ತಮ್ಮ ಹುಟ್ಟೂರಿನ 6ಜನ ಖೈದಿಗಳನ್ನ ಬಿಡಿಸಿದ್ದಾರೆ‌. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಜನ ಖೈದಿಗಳನ್ನು ನಟ ವಿಜಯ ಅವರೇ ದಂಡ ಕಟ್ಟಿ ಬಿಡುಗಡೆ ಮಾಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ‌ ಜೀವನ ನಡೆಸಿ ಎಂದು ಬಿಡುಗಡೆಯಾದವರಿಗೆ ನಟ ವಿಜಯ್ ಹಾರೈಸಿದ್ದಾರೆ.

Join Whatsapp