ಸುಳ್ಯ ನಗರ ಪಂಚಾಯತ್ ಮುಂಭಾಗ ಕಸದ ರಾಶಿ: ನಟ ಅನಿರುದ್ಧ್ ವೀಡಿಯೊ ವೈರಲ್

Prasthutha|

►ನಟನಿಗೆ ಮಾಹಿತಿ ನೀಡಿದ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ವಾಟ್ಸಪ್ ಗುಂಪಿನಿಂದ ಹೊರಕ್ಕೆ

- Advertisement -


ಸುಳ್ಯ: ನಗರ ಪಂಚಾಯತ್ ಎದುರಿನ ಕಸದ ರಾಶಿಯ ಬಗ್ಗೆ ಚಲನಚಿತ್ರ ನಟ ಅನಿರುದ್ಧ್ ಹೇಳಿಕೆ ಭಾರೀ ವೈರಲ್ ಆಗಿದೆ.

ಸುಳ್ಯದ ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರು ನಗರ ಪಂಚಾಯಿತಿ ಎದುರಿನ ಕಸದ ಚಿತ್ರಗಳನ್ನು ಅನಿರುದ್ಧ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿದ ನಟ ಅನಿರುದ್ಧ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಗರ ಪಂಚಾಯಿತಿ ಕಸದ ರಾಶಿ ಬೆಟ್ಟದ ಹಾಗೆ ಇದೆ. ಹಲವು ವರ್ಷಗಳಿಂದ ಅದಕ್ಕೆ ಪರಿಹಾರ ಕಂಡುಕೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಇದನ್ನು ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

- Advertisement -

ಅನಿರುದ್ದಗೆ ಮಾಹಿತಿ ನೀಡಿದ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ವಾಟ್ಸಪ್ ಗುಂಪಿನಿಂದ ಹೊರಗೆ..!

ಅನಿರುದ್ದ್ ಗೆ ಸುಳ್ಯ ನಗರದ ಕಸ ಸಮಸ್ಯೆ ತಿಳಿಸಿ, ಆ ವಿಡಿಯೋ ಶೇರ್ ಮಾಡಿದ ಬಿಜೆಪಿಯ ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿಯ ವಾಟ್ಸಪ್ ಗ್ರೂಪಿನಿಂದ ಸುಳ್ಯ ಬಿಜೆಪಿಯ  ಕಾರ್ಯದರ್ಶಿ ಶುಭೋದ್ ಶೆಟ್ಟಿ ಅವರು ತೆರವುಗೊಳಿಸಿರುವುದು ಈಗ ಚರ್ಚೆಗೀಡು ಮಾಡಿದೆ.



Join Whatsapp