ಮುರುಘಾ ಶ್ರೀಗಳು ದಶಕದಿಂದ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು: ಪೊಲೀಸ್ ಮೂಲಗಳು

Prasthutha|

ಬೆಂಗಳೂರು: ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮುರುಘಾ ಮಠದ ಧರ್ಮಗುರು ಶಿವಮೂರ್ತಿ ಶರಣರು ಕಳೆದ ಒಂದು ದಶಕದಿಂದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿರುವುದು ತನಿಖೆಯಿಂದ ಬಹಿರಂಗವಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿತ ಮುರುಘಾ ಶ್ರೀಗಳು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.

ಕಳೆದ 10 ವರ್ಷಗಳಿಂದ ಚಿತ್ರದುರ್ಗ ಮುರುಘಾ ಮಠದಲ್ಲಿ ಮುರುಘಾ ಶ್ರೀಗಳು ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರ ವಿರುದ್ಧ ಹಲವಾರು ಮಂದಿ ನೀಡಿದ ಅಘಾತಕಾರಿ ಹೇಳಿಕೆಗಳನ್ನು ಪೊಲೀಸರು ದೃಢಪಡಿಸಿದ್ದಾರೆ.

- Advertisement -

ಸಂತ್ರಸ್ತರಲ್ಲಿ ಕೆಲವರು ಗರ್ಭಪಾತ ಮಾಡಿಸಿಕೊಂಡಿದ್ದು, ಇನ್ನು ಕೆಲವರು ಮಠದ ಹಾಸ್ಟೆಲ್ ಬಿಟ್ಟು ಕಣ್ಮರೆಯಾಗಿದ್ದಾರೆ ಎಂದು ಶರಾನಂದ ಸ್ವಾಮೀಜಿಗಳು ಪೊಲೀಸರಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಬಸವ ಎಂದು ಕರೆಯಲ್ಪಡುವ ಮಠದಲ್ಲಿರುವ ಅನಾಥ ಮಕ್ಕಳನ್ನು ಆರೋಪಿ ಮುರುಘಾ ಶ್ರೀಗಳು ಲೈಂಗಿಕ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆರೋಪಿ ಮುರುಘಾ ಶ್ರೀಗಳು ಅತ್ಯಾಧುನಿಕ ಸ್ನಾನಗೃಹವನ್ನು ನಿರ್ಮಿಸಿದ್ದು, ಅಪ್ರಾಪ್ತರನ್ನು ಅಲ್ಲಿಗೆ ಕರೆಸಿ ಲೈಂಗಿಕ ದೌರ್ಜನ್ಯವೆಸಗಿರುವ ಅರೋಪವೂ ಕೇಳಿಬರುತ್ತಿದೆ.



Join Whatsapp