ಮಡಿಕೇರಿ | ಹಾಡಹಗಲೇ ಒಂಟಿ ಮನೆಗೆ ನುಗ್ಗಲು ಯತ್ನಿಸಿದ ಆರೋಪಿಯ ಬಂಧನ

Prasthutha|

ಗೋಣಿಕೊಪ್ಪ: ಮನೆಯಲ್ಲಿ ಒಂಟಿ ಮಹಿಳೆ ಇದ್ದ ಸಂದರ್ಭ ಕಾಂಪೌಂಡ್ ಹಾರಿ  ಮನೆಯೊಳಗೆ ನುಗ್ಗಲು ಯತ್ನಿಸಿದ ಆರೋಪಿಯನ್ನು ಮಹಿಳೆ ಚಾಣಾಕ್ಷತನದಿಂದ ಬಾಗಿಲು ಮುಚ್ಚಿ ಆತನಿಂದ ಪಾರಾಗಿ, ಆತನನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದಲ್ಲಿ ಬೆಂಗಳೂರು ಮೂಲದ ಆರೋಪಿ ಅರುಣ್ ಎಂಬಾತ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಸಾಹಸದಿಂದ ಬಾಗಿಲು ಮುಚ್ಚಿ, ಅನಾಹುತವನ್ನು ತಪ್ಪಿಸಿದ್ದರು. ತಕ್ಷಣ ಸ್ಥಳೀಯರು ಹಾಗೂ ಪೊಲೀಸರಿಗೆ ಮಹಿಳೆ ಮಾಹಿತಿ ನೀಡಿದರು.

ಸದ್ಯ ಮನೆಯ ಸಮೀಪದಲ್ಲೇ ಇದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ತಿತಿಮತಿ ಸಮೀಪದ ಗ್ರಾಮದಲ್ಲಿ ಮದುವೆಯಾಗಿದ್ದು, ಟಿ. ಶೆಟ್ಟಿಗೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಇನ್ನೂ ಆರೋಪಿಯನ್ನು ಬಂಧಿಸಿದ ಗೋಣಿಕೊಪ್ಪಲು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕಾಂಪೌಂಡ್ ಹಾರಿ ಮನೆಗೆ ನುಗ್ಗಲು ಯತ್ನಿಸಿದ ಆರೋಪಿಯ ವೀಡಿಯೋ ವೈರಲ್ ಆಗಿದೆ.

Join Whatsapp