ರಸ್ತೆಯಲ್ಲಿ ‘HAPPY NEW YEAR’ ಎಂದು ಬರೆಯಲು ಹೋದ ಇಬ್ಬರು ಯುವಕರು ಅಪಘಾತಕ್ಕೆ ಬಲಿ

Prasthutha|

ಉಡುಪಿ : ಹೊಸ ವರ್ಷಕ್ಕೆ ಶುಭಾಶಯ ಕೋರಿ ರಸ್ತೆಯಲ್ಲಿ ಸಂದೇಶ ಬರೆಯಲು ಹೋಗಿ ಇಬ್ಬರು ಯುವಕರು ಅಪಘಾತಕ್ಕೀಡಾಗಿ ಬಲಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಶರಣ್ (32) ಮತ್ತು ಸಿದ್ದು (28) ಮೃತಪಟ್ಟವರು ಎಂದು ಗುರುತಿಸಲಾಗಿದೆ.

- Advertisement -

ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ನಿನ್ನೆ ತಡರಾತ್ರಿ ಕಾರ್ಕಳದ ಮಿಯಾರು ಕಾಜರ ಬೈಲು ಎಂಬಲ್ಲಿ ‘ಹ್ಯಾಪಿ ನ್ಯೂ ಈಯರ್’ ಎಂದು ರಸ್ತೆಯಲ್ಲಿ ಬರೆಯಲು ಮುಂದಾಗಿದ್ದರು. ಆದರೆ, ಈ ವೇಳೆ ವೇಗವಾಗಿ ಬಂದ ಈಕೊ ಕಾರು ಢಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾನೆ,. ಶರಣ್ ಮತ್ತು ಸಿದ್ದು ಜೆಸಿಬಿ-ಟಿಪ್ಪರ್ ಚಾಲಕರಾಗಿ ದುಡಿಯುತ್ತಿದ್ದರು. ಘಟನೆ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp