ಶಿಕ್ಷಕರನ್ನು ತಡೆದ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಎಎಪಿಯಿಂದ ಪ್ರತಿಭಟನಾ ಮೆರವಣಿಗೆ

Prasthutha|

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಫಿನ್ ಲ್ಯಾಂಡಿಗೆ ತೆರಳಲಿದ್ದ ಶಿಕ್ಷಕರ ಅಧ್ಯಯನ ಪ್ರವಾಸವನ್ನು ತಡೆದುದನ್ನು ಖಂಡಿಸಿ ಇಂದು ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅವರು ಫಿನ್ ಲ್ಯಾಂಡಿಗೆ ಹೋಗಲಿದ್ದ ಶಿಕ್ಷಕರನ್ನು ತಡೆದುದೇಕೆ ಎಂದು ಸಕ್ಸೇನಾ ಅವರನ್ನು ಪ್ರಶ್ನಿಸಿದರು. ಇಡೀ ಮೆರವಣಿಗೆಯಲ್ಲಿ ಈ ಘೋಷಣೆಯು ದಿಲ್ಲಿಯ ಎಲ್ಲೆಡೆಗೆ ಪ್ರತಿಧ್ವನಿಸಿತು.

ತರಬೇತಿ ಮತ್ತು ಅಧ್ಯಯನಕ್ಕಾಗಿ ಶಿಕ್ಷಕರ ಒಂದು ತಂಡವು ಫಿನ್ ಲ್ಯಾಂಡಿಗೆ ಹೋಗಲು ತಯಾರಾಗಿತ್ತು. ಅದನ್ನು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ತಡೆದಿರುವುದರಿಂದ ಬಿಜೆಪಿ ಪರ ನಿಂತಿರುವ ಸಕ್ಸೇನಾ ಮತ್ತು ಎಎಪಿಯ ದಿಲ್ಲಿ ಸರಕಾರದ ನಡುವಣ ಹಗ್ಗ ಜಗ್ಗಾಟ ಮುಂದುವರಿದಿದೆ. 

Join Whatsapp