ಕಾಲುವೆಯಲ್ಲಿ ತೇಲಿ ಬಂದ ಕಾಡುಕೋಣ| ರಕ್ಷಣಾ ಕಾರ್ಯದ ವೇಳೆ ಸಾವು

Prasthutha|

ಶಹಾಪುರ: ಶಹಾಪುರ ಶಾಖಾ ಕಾಲುವೆಯಲ್ಲಿ ತೇಲಿಬಂದಿದ್ದ ಕಾಡುಕೋಣವನ್ನು ರಕ್ಷಿಸಿ ಚಿಕಿತ್ಸೆಗೆ ತೆಗೆದುಕೊಂಡು ಹೋಗುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ.

- Advertisement -

ಕಾಡುಕೋಣ ಕಾಲುವೆಯಲ್ಲಿ ತೇಲಿ ಬರುವುದನ್ನು ಕಂಡ ಜನರು
ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡದ ಸಹಾಯದಿಂದ
ಹಗ್ಗದಿಂದ ಮೇಲೆತ್ತಿ ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ತರುವಾಗ ಮಾರ್ಗ ಹೃದಯಾಘಾತದಿಂದ ಸಾವನ್ನಪ್ಪಿದೆ’ ಎಂದು ಉಪ
ಅರಣ್ಯ ವಲಯಾಧಿಕಾರಿ ಕಾಶಪ್ಪ ತಿಳಿಸಿದ್ದಾರೆ.

- Advertisement -

ಕಾಡುಕೋಣ ತೇಲುತ್ತಿರುವುದನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕಾಡುಕೋಣವನ್ನು ರಕ್ಷಿಸಿ ಚಿಕಿತ್ಸೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದೆ.

Join Whatsapp