ರಾಯಗಂಜ್ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಗೆ ಶೋಕಾಸ್ ನೋಟಿಸ್

Prasthutha|

ಕೋಲ್ಕತ್ತಾ: ಬಿಜೆಪಿ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ್ದ ರಾಯಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಅವರಿಗೆ ಪಕ್ಷದ ವರಿಷ್ಠರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

- Advertisement -

ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ, ಶಾಸಕ ಸುವೆಂದು ಅಧಿಕಾರಿ ತಿಳಿಸಿದರು.

ಬಿಜೆಪಿ ತನ್ನ ಸಿದ್ದಾಂತ ಮತ್ತು ಶಿಸ್ತಿನೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪಕ್ಷದಲ್ಲಿ ಉಳಿಯುವ ಮತ್ತು ನಿರ್ಗಮಿಸುವುದು ಪಕ್ಷದ ಆದ್ಯತೆಯಲ್ಲ ಎಂದು ಬಿಜೆಪಿ ಶಾಸಕರ ರಾಜೀನಾಮೆ ಕುರಿತು ಸುವೆಂದು ಅಧಿಕಾರಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

Join Whatsapp