ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಪೇದೆಗೆ ಚೂರಿ ಇರಿತ

Prasthutha|

ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಸೂಚನೆ ನೀಡಿದ ಪೊಲೀಸ್ ಕಾನ್ಸ್’ಟೇಬಲ್’ಗೆ ಚೂರಿಯಿಂದ ಇರಿದ ಘಟನೆ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ನಡೆದಿದೆ.

- Advertisement -

ಘಟನೆಯಲ್ಲಿ ಪೇದೆಯ ಕೈಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಾಮಗೊಂಟೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜನ ಸಂಚಾರವಿರುವ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ರಾಮಗೊಂಟೆಯೊಂದಿಗೆ  ಮೂತ್ರ ವಿಸರ್ಜನೆ ಮಾಡದಂತೆ ಕಾನ್ಸ್’ಟೆಬಲ್ ಸೂಚಿಸಿದ್ದಾರೆ.

- Advertisement -

ಈ ವೇಳೆ ಕೋಪಗೊಂಡ ಆರೋಪಿ ಪೇದೆ ಜೊತೆ ವಾಗ್ವಾದ  ನಡೆಸಿದ್ದು,  ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

Join Whatsapp