ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನ ಕೊಲೆ

Prasthutha|

ಮಂಗಳೂರು : ನಗರ ಹೊರವಲಯದ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.  

- Advertisement -

ಮೃತರನ್ನು ಕಟ್ಟಡ ಕಾರ್ಮಿಕ , ಕಾರ್ಕಳ ತಾಲೂಕು ಮುಂಡ್ಕೂರು ನಿವಾಸಿ ಹರೀಶ್ ಸಾಲ್ಯಾನ್ ( 37 ) ಎಂದು ಗುರುತಿಸಲಾಗಿದೆ.

ಕೊಲೆಯಾದ ಅಣತಿ ದೂರದಲ್ಲಿ ರಕ್ತಸಿಕ್ತ ಕಲ್ಲು ಸಿಕ್ಕಿದ್ದು , ಮೃತನ ಮೊಬೈಲ್ ಕೂಡ ಪತ್ತೆಯಾಗಿದೆ . ಸ್ಥಳದಲ್ಲಿ ಆತನ ಚೀಲ ದೊರೆತಿದ್ದು , ಅದರಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಬಪ್ಪನಾಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಸೀದಿ ಮತ್ತು ಪ್ರಸಾದ ಪತ್ತೆಯಾಗಿದೆ .

- Advertisement -

ಮದ್ಯದ ನಶೆಯಲ್ಲಿ ಹೊಡೆದಾಡಿಕೊಂಡು ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ . ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp