ಜನರು ನೋಡುತ್ತಿದ್ದಂತೆಯೇ ವ್ಯಕ್ತಿಯ ಕೊಂದ ಸಿಂಹ

Prasthutha|

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಉತ್ತರ ಭಾರತದ ವ್ಯಕ್ತಿಯೊಬ್ಬರು ಸಿಂಹಕ್ಕೆ ಬಲಿಯಾಗಿದ್ದಾರೆ. ಎಲ್ಲರೂ ನೋಡನೋಡುತ್ತಿದ್ದಂತೆ ಸಿಂಹ ಆತನನ್ನು ಕೊಂದು ಹಾಕಿದೆ. ತಿರುಪತಿಯಲ್ಲಿರುವ ಝೂ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಪ್ರಹ್ಲಾದ್‌ ಗುರ್ಜರ್‌ ಸಿಂಹಕ್ಕೆ ಜೀವತೆತ್ತ ವ್ಯಕ್ತಿ.

- Advertisement -

ತಿರುಪತಿಯಲ್ಲಿರುವ ಏಷ್ಯಾದ ಅತಿದೊಡ್ಡ ಮೃಗಾಲಯಕ್ಕೆ ಭೇಟಿ ನೀಡಿದ್ದ ಪ್ರಹ್ಲಾದ್‌ ಸಿಂಹ ಇರುವ ಪ್ರದೇಶದ ಬೇಲಿ ಹಾರಿ ಒಳಹೋಗಿದ್ದಾರೆ. ಈ ವೇಳೆ ಸಿಂಹ ದಾಳಿ ಮಾಡಿ ಆತನನ್ನು ಕೊಂದುಹಾಕಿದೆ. ಝೂ ಸಿಬ್ಬಂದಿ, ಪ್ರಹ್ಲಾದ್‌ರನ್ನು ಉಳಿಸಲು ಯತ್ನಿಸಿದರಾದರೂ ಅಷ್ಟರಲ್ಲಿ ಸಿಂಹ, ಆತನನ್ನು ಕೊಂದು ಮುಗಿಸಿದೆ. ಪ್ರಹ್ಲಾದ್‌ ಅವರ ಮುಖದ ಕೆಲ ಭಾಗನ ಕಚ್ಚಿ ತಿಂದಿದೆ ಎಂದು ತಿಳಿದುಬಂದಿದೆ.

ತಿರುಪತಿಗೆ ಬರುವ ಭಕ್ತರು ಈ ಝೂ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ವಿಶಾಲವಾದ ಈ ಝೂ ಪಾರ್ಕ್‌ನಲ್ಲಿ ಅನೇಕ ಕಾಡುಮೃಗಗಳಿವೆ… ಹಾಗೆಯೇ ರಾಜಸ್ಥಾನದಿಂದ ಬಂದಿದ್ದ ಪ್ರಹ್ಲಾದ್‌ ಕೂಡಾ ಝೂಪಾರ್ಕ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸಿಂಹವಿರುವ ಸ್ಥಳಕ್ಕೆ ನುಗ್ಗಿದ್ದಾರೆ. ಅವರೇ ಅಲ್ಲಿಗೆ ಹಾರಿಹೋಗಿದ್ದರಿಂದ ಸಿಂಹ ಅವರನ್ನು ಸಾಯಿಸಿದೆ.

- Advertisement -

ಡಿಎಸ್‌ಪಿ ಶರತ್‌ ರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತ್ತಿರುವ ವ್ಯಕ್ತಿಯ ತಪ್ಪಿನಿಂದಲೇ ಹೀಗೆ ಆಗಿದೆಯೇ ಅಥವಾ ಝೂ ಸಿಬ್ಬಂದಿಯ ಅಚಾತುರ್ಯದಿಂದ ಹೀಗೆ ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇಲ್ಲವೇ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದರೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ.

Join Whatsapp