ನಾಯಿ ಹೊತ್ತೊಯ್ದ ಚಿರತೆ

Prasthutha|

ಶ್ರವಣಬೆಳಗೊಳ: ಅರ್ಧಗಂಟೆಗೂ ಹೆಚ್ಚು ಕಾಲ ಹೊಂಚು ಹಾಕಿ ಮನೆ ಕಾಂಪೌಡ್ ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಇಲ್ಲಿನ ಶ್ರೀ ಕಂಠನಗರ ಬಡಾವಣೆಯಲ್ಲಿ ನಡೆದಿದೆ.

- Advertisement -

ಬಡಾವಣೆಯ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ನಾಯಿಯನ್ನು ಕಾಂಪೌಡ್ ನಲ್ಲಿ ಕಟ್ಟಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಬಂದಿರುವ ಚಿರತೆ, ಕೆಲಕಾಲ ಹೊಂಚು ಹಾಕಿ ನಂತರ ನಾಯಿ ಹೊತ್ತೊಯ್ಯಲು ಪ್ರಯತ್ನಪಟ್ಟಿದೆ. ಬಾಕ್ಸ್ ಗೆ ಚೈನ್ ನಿಂದ ನಾಯಿ ಕಟ್ಟಿಹಾಕಿದ್ದರಿಂದ ನಾಯಿಯನ್ನು ಎಳೆದೊಯ್ಯಲು ಹರಸಾಹಸಪಟ್ಟಿದೆ. ಕೊನೆಗೂ ಚಿರತೆ ನಾಯಿಯನ್ನು ಕಚ್ಚಿ ಬೈಕ್ ಮೇಲೆ ಹತ್ತಿ ಹೋಗಿದೆ.

ಬೈಕ್ ಕೆಳಕ್ಕೆ ಬಿದ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪಲ್ಲವಿ ಭೇಟಿ ಪರಿಶೀಲನೆ ನಡೆಸಿದರು. ಬೆಳಗೊಳದ ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟಗಳಲ್ಲಿ ಚಿರತೆಗಳು ಹೆಚ್ಚು ವಾಸಿಸುತ್ತಿದ್ದು, ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಬಂದು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Join Whatsapp