ಕಡತವಿಲ್ಲದ ವಕೀಲ ಬ್ಯಾಟ್ ಇಲ್ಲದ ಸಚಿನ್ ನಂತೆ: ಸಿಜೆಐ ಡಿ.ವೈ. ಚಂದ್ರಚೂಡ್

Prasthutha|

ನವದೆಹಲಿ: ಪ್ರಕರಣದ ಕಡತವಿಲ್ಲದೆ ತನ್ನ ಮುಂದೆ ಹಾಜರಾದ ವಕೀಲರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಕಡತವಿಲ್ಲದ ವಕೀಲರು ಬ್ಯಾಟ್ ಇಲ್ಲದ ಸಚಿನ್ ತೆಂಡೂಲ್ಕರ್ ರಂತೆ ಎಂದು ಹೇಳಿದ್ದಾರೆ.

- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ನ್ಯಾಯ ಮೂರ್ತಿಗಳು ಹೀಗೆ ಹೇಳಿದ್ದಾರೆ. ಕಡತವಿಲ್ಲದೆ ತನ್ನ ಮುಂದೆ ಹಾಜರಾದ ವಕೀಲರನ್ನು ಉದ್ದೇಶಿಸಿ,   ಕಡತವಿಲ್ಲದ ವಕೀಲರು ಬ್ಯಾಟ್ ಇಲ್ಲದೆ ಸಚಿನ್ ತೆಂಡೂಲ್ಕರ್ ಅವರಂತೆ. ಇದು ಕೆಟ್ಟದಾಗಿ ಕಾಣುತ್ತದೆ  ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Join Whatsapp