ಮಚ್ಚಿನಿಂದ ಕೊಚ್ಚಿ ಟೆಂಪೋ ಚಾಲಕನ ಭೀಕರ ಹತ್ಯೆ

Prasthutha|

ಬೆಂಗಳೂರು: ಕುಡಿದ ಮತ್ತಿನಲ್ಲಿ  ನಡೆದ ಜಗಳದಲ್ಲಿ ಟೆಂಪೋ ಚಾಲಕರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರ್ತೂರಿನ ಅಲಸಹಳ್ಳಿ ಮುಖ್ಯ ರಸ್ತೆಯ ಬಾರ್ ಬಳಿ ನಿನ್ನೆ ರಾತ್ರಿ ನಡೆದಿದೆ.

- Advertisement -

ಸರ್ಜಾಪುರದ ದೊಡ್ಡಬೊಮ್ಮಸಂದ್ರ ಬಡಾವಣೆಯ ಟೆಂಪೋ ಚಾಲಕ  ಮುನಿಯಪ್ಪ(45) ಕೊಲೆಯಾದವರು. ಕೃತ್ಯ ನಡೆಸಿದ ದೊಡ್ಡಬೊಮ್ಮಸಂದ್ರ ಬಡಾವಣೆಯ ತರಕಾರಿ ವ್ಯಾಪಾರಿ ಶ್ರೀಧರ್(25)ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಟೆಂಪೋ ಚಾಲಕನ ಕೊಂದ ತರಕಾರಿ ವ್ಯಾಪಾರಿ ಶ್ರೀಧರ್

- Advertisement -

ಅಲಸಹಳ್ಳಿ ಮುಖ್ಯ ರಸ್ತೆಯ ಬಾರ್ ಬಳಿ ಒಂದೇ ಏರಿಯಾದಲ್ಲಿ ವಾಸವಿದ್ದ ಶ್ರೀಧರ್ ಹಾಗೂ ಮುನಿಯಪ್ಪ ರಾತ್ರಿ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಶ್ರೀಧರ್ ಮಚ್ಚಿನಿಂದ ಹೊಡೆದು ಮುನಿಯಪ್ಪ ಅವರನ್ನು ಕೊಲೆ ಮಾಡಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ವರ್ತೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಶ್ರೀಧರ್’ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

Join Whatsapp