ಅಮೂಲ್ಯ ಜೀವಕ್ಕೆ “ಎರವಾದ” ನೀರಿನ ಬಾಟಲ್..!

Prasthutha|

ನೋಯ್ಡಾ: ದಾಹತೀರಿಸಲು ಕಾರಿನಲ್ಲಿ ಇಟ್ಟಿದ್ದ ನೀರಿನ ಬಾಟಲ್’ನಿಂದಾಗಿ ಓರ್ವ ಎಂಜಿನಿಯರ್ ತನ್ನ ಅಮೂಲ್ಯ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾ’ದಲ್ಲಿ ನಡೆದಿದೆ.

- Advertisement -

ದೆಹಲಿಯ ನಿವಾಸಿ, ನೋಯ್ಡಾದಲ್ಲಿ ಎಂಜಿನಿಯರ್ ಅಭಿಷೇಕ್ ಝಾ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಗ್ರೇಟರ್ ನೋಯ್ಡಾ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ʼಗೆ, ಅವರು ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸ್ನೇಹಿತ ಗಂಭೀರ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಅಪಘಾತಕ್ಕೆ ಕಾರಣವಾಗಿದ್ದು ನೀರಿನ ಬಾಟಲ್ !

ಕಾರಿನಲ್ಲಿದ್ದ ನೀರಿನ ಬಾಟಲಿಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಅಭಿಷೇಕ್ ಕಾರನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಡೋರ್ ಪ್ಯಾಡ್’ನಲ್ಲಿ ಇರಿಸಲಾಗಿದ್ದ ನೀರಿನ ಬಾಟಲಿ ಕೆಳಗೆ ಜಾರಿ, ಬ್ರೇಕ್ ಪಡೆಲ್ ಅಡಿಯಲ್ಲಿ ಬಿದ್ದಿತ್ತು. ಈ ವೇಳೆ ಕಾರು ಟ್ರಕ್’ಅನ್ನು ಸಮೀಪಿಸುತ್ತಿದ್ದಂತೆ, ಅಭಿಷೇಕ್ ಬ್ರೇಕ್ ಹಾಕಲು ಪ್ರಯತ್ನಿಸಿದರೂ, ಬ್ರೇಕ್ ಪೆಡಲ್ ಕೆಳಗೆ ನೀರಿನ ಬಾಟಲಿ ಇದ್ದುದರಿಂದ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಗ್ರೇಟರ್ ನೋಯ್ಡಾದ ಸೆಕ್ಟರ್ 144ರ ಬಳಿ ರಸ್ತೆಯ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಕ್ʼಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp