ಕುಡುಕ ತಂದೆಯಿಂದಲೇ ಕೊಲೆಯಾದ 9 ತಿಂಗಳ ಹಸುಳೆ

Prasthutha|

ಯಾದಗಿರಿ: ಕುಡಿದ ನಶೆಯಲ್ಲಿ ತಂದೆಯೊಬ್ಬ ತನ್ನ 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದ ಘಟನೆ ಗುರುಮಿಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.

- Advertisement -


ಆರೋಪಿಯನ್ನು ಬದ್ದೆಪಲ್ಲಿ ನಿವಾಸಿ ರಾಮು ಎಂದು ಗುರುತಿಸಲಾಗಿದೆ. ಮಗು ಅಳುತ್ತಿತ್ತು ಎಂಬ ಕಾರಣಕ್ಕೆ ಕೊರಳಲ್ಲಿದ್ದ ದಾರವನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.


ಮದುವೆಯಾಗಿ ಮೂರು ವರ್ಷವಾದ ಸಾವಿತ್ರಮ್ಮ, ರಾಮು ದಂಪತಿಯ 9 ತಿಂಗಳ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು. ರಾಮು ಮದ್ಯವ್ಯಸನಿಯಾಗಿದ್ದು, ಸಾವಿತ್ರಮ್ಮ ಒಬ್ಬಳೇ ಕೂಲಿ ಕೆಲಸ ಮಾಡಿ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ.

- Advertisement -


ಮಗು ಸತ್ತ ಬಗ್ಗೆ ಬೇರೆಯೇ ಕಥೆ ಕಟ್ಟಿದ್ದ ಕುಡುಕ ರಾಮುವನ್ನು ಹಲವು ಆಯಾಮಗಳಲ್ಲಿ ಪ್ರಶ್ನಿಸಿದಾಗ ಕುಡಿದ ನಶೆಯಲ್ಲಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಪತ್ನಿ ಸಾವಿತ್ರಮ್ಮ ನೀಡಿದ ದೂರಿನನ್ವಯ ಸೈದಾಪುರ ಪೊಲೀಸರು ರಾಮುವನ್ನು ಬಂಧಿಸಿದ್ದಾರೆ.



Join Whatsapp