ಉಳ್ಳಾಲ ನಗರಸಭೆ: ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ರವಿ ಅವರಿಂದ ಸ್ವ-ಪಕ್ಷದ ವಿರುದ್ಧವೇ ಅರೆನಗ್ನ ಪ್ರತಿಭಟನೆ

Prasthutha|

ಉಳ್ಳಾಲ: ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ನಗರಸಭೆಗೆ ಪಾವತಿಸದೆ ಅಧಿಕಾರಿಗಳು ತೆರಿಗೆ ಹಣ ಲೂಟಿ ಮಾಡುತ್ತಿರುವುದನ್ನು ವಿರೋಧಿಸಿ ಸ್ವಪಕ್ಷದ ಸದಸ್ಯರೊಬ್ಬರು ಅರೆನಗ್ನವಾಗಿ ಪ್ರತಿಭಟಿಸಿದ ಘಟನೆಯು ನಡೆದಿದೆ.

- Advertisement -

ಉಳ್ಳಾಲ ನಗರಸಭೆ ಸದಸ್ಯ ರವಿಚಂದ್ರ ಯಾನೆ ಪಾನಕ ರವಿ, ನಗರಾಡಳಿತ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಮತ್ತು ಸಾರ್ವಜನಿಕರಿಗೆ ಅನುದಾನ ಮಂಜೂರು ಮಾಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಅರೆನಗ್ನವಾಗಿ ಪ್ರತಿಭಟಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಟ್ಟಡಗಳಿಗೆ ಡೋರ್ ನಂಬರ್ ನೀಡಲು, ಅಧ್ಯಕ್ಷರಾದ ಚಿತ್ರಕಲಾ ಮತ್ತು ಉಪಾಧ್ಯಕ್ಷ ಅಯ್ಯೂಬ್ ಜನರಿಂದ ನಲ್ವತ್ತರಿಂದ ಐವತ್ತು ಸಾವಿರ ಲಂಚ ಪಡೆಯುತ್ತಾರೆ ಎಂದು ಆರೋಪಿಸಿ‍ದರು ಮತ್ತು ನಗರಾದ್ಯಂತ ಸಂಗ್ರಹಿಸಿದ ತೆರಿಗೆ ಹಣವನ್ನೂ ನಗರಸಭೆಗೆ ಪಾವತಿಸದೆ , ನಕಲಿ ರಶೀದಿ ಕೊಟ್ಟು ಜನರನ್ನು‌ ವಂಚಿಸುತ್ತಿದ್ದಾರೆ ಎಂದು ಹೇಳಿದರು.



Join Whatsapp